×
Ad

ಕಾರಟಗಿ: 3ನೇ ಹಂತದ ಜಲಜಾಗೃತಿ - ಜನಜಾಗೃತಿ ಪಾದಯಾತ್ರೆ

ಕಲುಷಿತ ನೀರಿನಿಂದ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ: ರಾಜಶ್ರೀ ಚೌಧರಿ

Update: 2025-12-28 20:18 IST

ಕಾರಟಗಿ : ಭಾರತ ದೇಶದ ನೆಲ ಜಲ ಅರಣ್ಯವು ವಿಶೇಷ ಸ್ಥಾನಮಾನ ಪಡೆದಿದೆ, ಯುವಗಳಿಗೆ ತಾಯಿಯ ಸ್ಥಾನವನ್ನು ನೀಡಿ ಭಕ್ತಿ ಭಾವಕರಾಗಿ ಪೂಜೆ ಸಲ್ಲಿಸುತ್ತೇವೆ. ಆದರೆ ಇತ್ತೀಚಿನ ಕೈಗಾರಿಕೆಗಳಿಂದ ದೇಶದ ಅನೇಕ ನದಿಗಳು ಕಲುಷಿತಗೊಂಡು ಜನರ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ ಎಂದು ವೀರಯೋಧ ಸುಭಾಷ್ ಚಂದ್ರ ಬೋಸ್ ರವರ ಮರಿ ಮೊಮ್ಮಗಳು ರಾಜಶ್ರೀ ಚೌದರಿ ಮಾತನಾಡಿದರು.

ಅವರು ಹೊಸದಿಲ್ಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ, ಕರ್ನಾಟಕ ಪರ್ಯಾವರಣ ಟ್ರಸ್ಟ್ ಶಿವಮೊಗ್ಗ ಹಾಗೂ ಕಾರಟಗಿಯ ಜಾಗೃತಿ ಯುವಕ ಸಂಘದಿಂದ ಹಮ್ಮಿಕೊಂಡಿದ್ದ ಮೂರನೇ ಹಂತದ ಜಲ ಜಾಗೃತಿ ಜನಜಾಗೃತಿ ಪಾದಯಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈಗಾಗಲೇ ನದಿಗಳ ಉಳಿವಿಗಾಗಿ ನಮ್ಮ ಹೋರಾಟವು ಮೂರನೇ ಹಂತ ತಲುಪಿದೆ ಈ ಭಾಗದಲ್ಲಿ ಗಂಗಾವತಿಯಿಂದ ಮಂತ್ರಾಲಯದವರೆಗೂ ಪಾದಯಾತ್ರೆ ಕಾರ್ಯಕ್ರಮ ಜರುಗಲಿದ್ದು, ತುಂಗಭದ್ರ ನದಿಯು ಬಹಳಷ್ಟು ಕಲುಷಿತಗೊಳ್ಳುತ್ತಿದ್ದು, ಅನೇಕ ಜನರು ಮರಣ ಹೊಂದಿದ್ದಾರೆ ಅಲ್ಲದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನೀರಿನ ಆಮ್ಲಜನಕ ಪ್ರಮಾಣ ಕ್ಷೀಣಿಸುತ್ತಿದ್ದು, ಹಲವು ಅಪರೂಪದ ಜಲಚರ ಪ್ರಾಣಿಗಳು ನಾಶ ಹೊಂದಿವೆ. ಈಗಾಗಲೇ ನದಿ ನೀರಿನ ಮಟ್ಟ ಬಿ ಮತ್ತು ಸಿ ಶ್ರೇಣಿಗೆ ತಲುಪಿದ್ದು ಮುಂದಿನ ದಿನಗಳಲ್ಲಿ ಯಾವುದಕ್ಕೂ ಬಳಸಲು ಯೋಗ್ಯವಾಗದ ಸ್ಥಿತಿ ತಲುಪಬಹುದು. ಹೀಗಾಗಿ ನದಿಯ ಪವಿತ್ರತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು ಪ್ರತಿಯೊಬ್ಬರು ಕೈ ಜೋಡಿಸಿ ಸರ್ಕಾರಕ್ಕೆ ಮುಟ್ಟುವ ರೀತಿ ನಮ್ಮ ಅಭಿಯಾನ ನಡೆಯಬೇಕು ಎಂದರು.

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಯನ್ನು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಶರಣಪ್ಪ ಕೋಟ್ಯಾಳ ಮಾತನಾಡಿ, ಬಳ್ಳಾರಿ ಕೊಪ್ಪಳ ರಾಯಚೂರು ಹಾಗೂ ಗಡಿ ರಾಜ್ಯದ ಜೀವನಾಡಿಯಾಗಿರುವ ತುಂಗಭದ್ರೆಯು ಅಳಿವಿನ ಅಂಚಿನಲ್ಲಿದ್ದಾಳೆ. ಈ ವಿಚಾರದ ಕುರಿತು ಅನೇಕ ತಜ್ಞರ ವರದಿ ಹಾಗೂ ಪತ್ರಿಕೆ ಸುದ್ದಿಗಳ ವರದಿಯನ್ನು ಈಗಾಗಲೇ ನಾವು ಆಲಿಸಿದ್ದೇವೆ. ಜೀವನದಿ ಪವಿತ್ರತೆಯ ಬಗ್ಗೆ ನಾವು ಹೆಚ್ಚಾಗಿ ತಿಳಿದುಕೊಳ್ಳಬೇಕಿದೆ. ಅದರ ಉಳಿವಿಗಾಗಿ ನಾವೆಲ್ಲರೂ ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಅನೇಕ ಜನರು ನವದೆಹಲಿ ಕೊಲ್ಕತ್ತಾ ಸೇರಿದಂತೆ ಅನೇಕ ರಾಜ್ಯಗಳಿಂದ ಆಗಮಿಸಿ ತಾಯಿ ತುಂಗಭದ್ರಾ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಸ್ಥಳೀಯರಾದ ನಾವು ಮೂರನೇ ಹಂತದ ಜಲ ಜಾಗೃತಿ ಜನಜಾಗೃತಿ ಪಾದಯಾತ್ರೆಗೆ ಸಹಕರಿಸೋಣ ಇನ್ನು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಸರಕಾರಕ್ಕೆ ಮುಟ್ಟಿಸುವ ಧ್ವನಿಯಾಗೋಣ ಎಂದರು.

ಕಳೆದ ಒಂದು ವಾರದ ಹಿಂದೆ ಶ್ರೀ ಪುಣ್ಯಕೋಟಿ ಕಿಡ್ಸ್ ಯೂನಿವರ್ಸಿಟಿಯಿಂದ ತುಂಗಭದ್ರೆಯ ಮಾಲಿನ್ಯದ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದ್ದು ವಿಜೇತರಿಗೆ ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಬಸವರಾಜ ಶೆಟ್ಟರ್, ಮರಳು ಸಿದ್ದಯ್ಯ ಸ್ವಾಮಿ, ವೀರಭದ್ರಯ್ಯ ಸ್ವಾಮಿ ತಲಿಖಾನಮಠ, ಪಾದಯಾತ್ರೆಯ ರುವಾರಿಗಳಾದ ಲಲಿತರಾಣಿ ಶ್ರೀರಂಗದೇವರಾಯಲು, ಮಾಜಿ ಶಾಸಕರಾದ ಮಹಿಮಾ ಪಾಟೀಲ್, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಂಘಟನಾ ಸದಸ್ಯರಾದ ಗಿರಿರಾಜ್ ಗುಪ್ತ, ಸಿಪಿ ಮಾಧವನ್, ಮಾಜಿ ಶಾಸಕ ಬಸವರಾಜ ಧಡೆಸುಗೂರು, ಪ್ರಭು ಉಪನಾಳ, ಪ್ರಹ್ಲಾದ್ ಜೋಶಿ, ಶರಣಪ್ಪ ಕಾಯಗಡ್ಡಿ, ನಾರಾಯಣ ಈಡಿಗೇರ್, ಮರಿಯಪ್ಪ ಸಾಲೋಣಿ, ವೀರನಗೌಡ ಮಾಲಿಪಾಟೀಲ್, ಅಮರೇಶ ಕುಳಿಗಿ, ಸಿದ್ದನಗೌಡ, ರುದ್ರಗೌಡ ನಂದಿಹಳ್ಳಿ, ನಾಗರಾಜ ತಂಗಡಗಿ ವಿವಿಧ ಸಂಘಟನೆಯ ಪದಾಧಿಕಾರಿಗಳು, ಶಾಲಾ ಶಿಕ್ಷಕರು ಮತ್ತು ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪಟ್ಟಣದ ಅನೇಕ ಮುಖಂಡರು ಸಾರ್ವಜನಿಕರು ಕಾರ್ಯಕ್ರಮ ಮತ್ತು ಪಾದಯಾತ್ರೆಯಲ್ಲಿ ಪಾಲ್ಗೊಂಡರು.





Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News