ರಾಯಚೂರು| ಸಿಂಧನೂರು–ಸಿರುಗುಪ್ಪ ರಸ್ತೆಯಲ್ಲಿ ಭೀಕರ ಅಪಘಾತ: ಐವರು ಸ್ಥಳದಲ್ಲೇ ಮೃತ್ಯು
Update: 2026-01-20 23:05 IST
ಸಿಂಧನೂರು: ಟಾಟ ಏಸ್ ಹಾಗೂ ಬೊಲೆರೊ ಪಿಕ್ ಆಫ್ ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಿಂಧನೂರು-ಸಿರುಗುಪ್ಪ ರಸ್ತೆಯಲ್ಲಿ ಬೂದಿವಾಳ ಕ್ಯಾಂಪಿನ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಮೃತರನ್ನು ಸಿರುಗುಪ್ಪಾ ತಾಲೂಕಿನ ಚಳ್ಳೆಕಡ್ಲೂರು ಗ್ರಾಮದ ನಿವಾಸಿಗಳಾದ ಸಣ್ಣಯಲ್ಲಯ್ಯ (40), ರಂಗನಾಥ ಕಲ್ಲೂರು ( 15), ಹರಿ (36) ಎಂದು ಗುರುತಿಸಲಾಗಿದೆ. ಇದಲ್ಲದೆ ಲಾರಿಯ ಚಾಲಕ ಮತ್ತು ಕ್ಲೀನರ್ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಅಪಘಾತದಲ್ಲಿ ಇನ್ನೂ ಕೆಲವರಿಗೆ ಗಾಯವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಳದ ಸಾಧ್ಯತೆ ಇದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಸೇರಿ ಪೊಲೀಸ್ಅ ಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.