ರಾಯಚೂರು | ಸಿಡಿಲು ಬಡಿದು ಯುವಕ ಮೃತ್ಯು
Update: 2025-05-19 20:34 IST
ಹನುಮಗೌಡ ನಾಯಕ
ರಾಯಚೂರು : ಸಿಡಿಲು ಬಡಿದು ಯುವಕನೊರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಅರಕೇರಾ ತಾಲ್ಲೂಕಿನ ಭೋಗಿರಾಮನ ಗುಂಡ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಹನುಮಗೌಡ ನಾಯಕ(16) ಎಂದು ಗುರುತಿಸಲಾಗಿದೆ.
ಬಾಲಕ ಗ್ರಾಮದ ಹೊರ ವಲಯದ ಶಂಕರಬಂಡಿ ಹೊಲದಲ್ಲಿ ಕುರಿ ಮೇಯಿಸುತ್ತಿರುವ ಸಂದರ್ಭದಲ್ಲಿ ಮಳೆ, ಗಾಳಿ ಬಂದಿದ್ದು ತಕ್ಷಣವೇ ಎಲ್ಲಾ ಕುರಿಗಳನ್ನು ಒಂದು ಕಡೆ ಕೊಡಿ ಹಾಕುತ್ತಿರುವ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.