×
Ad

ಒಳಮೀಸಲಾತಿ ಸಮೀಕ್ಷೆ; ಪ್ರಶ್ನೆಗಳನ್ನು ಸರಳೀಕರಿಸಲು ಬಿಜೆಪಿ ಆಗ್ರಹ

Update: 2025-05-11 20:12 IST

ಸಾಂದರ್ಭಿಕ ಚಿತ್ರ | PC: Grok

ಬೆಂಗಳೂರು : ಪರಿಶಿಷ್ಟ ಜಾತಿಯಲ್ಲಿನ ವಿವಿಧ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣ, ಜಾತಿಗಣತಿಯಲ್ಲಿನ ಪ್ರಶ್ನಾವಳಿಗಳಿಗೆ ಮಾಹಿತಿ ನೀಡಲು ಪರದಾಡುವಂತಾಗಿದೆ. ಹಾಗಾಗಿ ಪ್ರಶ್ನೆಗಳನ್ನು ಸರಳೀಕರಿಸುವ ಅಗತ್ಯವಿದೆ. ರಾಜ್ಯದ ಸರಕಾರ ಈ ಕುರಿತಂತೆ ಗಮನಹರಿಸಬೇಕಿದೆ ಎಂದು ಬಿಜೆಪಿ ಸಲಹೆ ನೀಡಿದೆ.

ರವಿವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ‘ಜಾತಿಗಣತಿ ಜಟಾಪಟಿಯ ಮಧ್ಯೆ ರಾಜ್ಯ ಸರಕಾರ ಒಳಮೀಸಲಾತಿ ಸಮೀಕ್ಷೆಗೆ ಮುಂದಾಗಿದೆ. ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರಿಂದ ಗಣತಿ ನಡೆಯಲಿದೆ. ಸಿಬ್ಬಂದಿಗೆ ಬರೀ 3 ತಾಸು ತರಬೇತಿ ನೀಡಿ ಗಣತಿ ಕಾರ್ಯ ನಡೆದಿದ್ದು, ಎಡವಟ್ಟುಗಳ ಬಗ್ಗೆ ಎಡಗೈ-ಬಲಗೈ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದು ಉಲ್ಲೇಖಿಸಿದೆ.

‘ಬಹಳಷ್ಟು ಗಣತಿದಾರರ ಬಳಿ ಉತ್ತಮ ಗುಣಮಟ್ಟದ ಮೊಬೈಲ್‍ಗಳು ಇಲ್ಲದ ಕಾರಣ ಜಾತಿಗಣತಿ ಆಪ್ ಡೌನ್‍ಲೋಡ್ ಮಾಡಿ ಸಮೀಕ್ಷೆ ನಡೆಸಲು ಸಮಸ್ಯೆಯಾಗುತ್ತಿದೆ. ಸರ್ವರ್ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವೆಡೆ ಗೊತ್ತಿದ್ದೂ ತಪ್ಪು ಮಾಹಿತಿ ದಾಖಲೆ ಸೇರುತ್ತಿದೆ’ ಎಂದು ಬಿಜೆಪಿ ಇದೇ ವೇಳೆ ಅಸಮಾಧಾನ ಹೊರಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News