×
Ad

ಮಂಡ್ಯ | ನಾಲೆಗೆ ಬಿದ್ದ ಕಾರು; ಚಾಲಕ ನೀರು ಪಾಲು

Update: 2023-07-27 21:51 IST

ಮಂಡ್ಯ, ಜು.27: ಚಾಲಕನ ನಿಯಂತ್ರಣ ತಪ್ಪಿದ ಕಾರು ವಿ.ಸಿ.ನಾಲೆಗೆ ಉರುಳಿದ ಪರಿಣಾಮ ಚಾಲಕ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ತಾಲೂಕಿನ ಶಿವಳ್ಳಿ ಸಮೀಪದ ತಿಬ್ಬನಹಳ್ಳಿ ಬಳಿ ನಡೆದಿದೆ.

ಘಟನೆಯಲ್ಲಿ ಶಿವಳ್ಳಿ ಗ್ರಾಮದ ಲೋಕೇಶ್(48) ನೀರು ಪಾಲಾಗಿದ್ದು, ಅತನ ಸ್ನೇಹಿತ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಶಿವಳ್ಳಿ ಗ್ರಾಮದಲ್ಲಿ ಮೆಡಿಕಲ್ ಸ್ಟೋರ್ ಇಟ್ಟುಕೊಂಡಿದ್ದ ಲೋಕೇಶ್, ಕಾರ್ಯನಿಮಿತ್ತ ಸ್ನೇಹಿತನ ಜತೆ ಕಾರಿನಲ್ಲಿ ಪಾಂಡವಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News