×
Ad

ಎಡವಟ್ಟು | ಹಿಂದಿನ ವರ್ಷದ ರಾಜ್ಯೋತ್ಸವ ಪುರಸ್ಕೃತರ ಹೆಸರು ಓದಿದ‌ ಸಚಿವ ತಂಗಡಗಿ

Update: 2023-11-01 12:55 IST

ಶಿವರಾಜ ತಂಗಡಗಿ - ಸಚಿವರು 

ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸವಚಿವ ಶಿವರಾಜ ತಂಗಡಗಿ ಅಧಿಕಾರಿಗಳ ಯಡವಟ್ಟಿನಿಂದಾಗಿ ಪೇಚಿಗೆ ಸಿಲುಕಿದರು.

ಧ್ವಜಾರೋಹಣ ಬಳಿಕ ಜಿಲ್ಲೆಯ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಸಚಿವರು, ತಮ್ಮ ಭಾಷಣದಲ್ಲಿ ಕಳೆದ ವರ್ಷದ ರಾಜ್ಯೋತ್ಸವ ಪುರಸ್ಕೃತರ ಹೆಸರನ್ನು ಓದಿದ್ದಾರೆ.  ಈ ಬಾರಿ ಪ್ರಶಸ್ತಿಗೆ ಭಾಜನರಾದವರ ಹೆಸರನ್ನು ಸಚಿವರ ಭಾಷಣದಲ್ಲಿ ಸೇರಿಸದೇ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆನ್ನಲಾಗಿದೆ.

ಜಿಲ್ಲೆಯ ತೊಗಲು ಗೊಂಬೆ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರ, ಭೂ ದಾನಿ ಹುಚ್ಚಮ್ಮ ಚೌದ್ರಿ ಹಾಗೂ ಹಗಲು ವೇಷ ಕಲಾವಿದ ವಿಭೂತಿ ಗುಂಡಪ್ಪ ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಆದರೆ, ಅಧಿಕಾರಿಗಳು ಸಚಿವರ ಭಾಷಣದಲ್ಲಿ ಕಳೆದ ವರ್ಷ ಪ್ರಶಸ್ತಿ ಪಡೆದ ಶಂಕ್ರಪ್ಪ ಹೊರಪೇಟಿ‌ ಹಾಗೂ ಸಣ್ಣ ರಂಗಪ್ಪ ಚಿತ್ರಗಾರ ಹೆಸರು ಹಾಕಿದ್ದಾರೆ. ಅವರ ಹೆಸರುಗಳನ್ನೇ ಸಚಿವರು ಓದಿ ಪೇಚಿಗೆ ಸಿಲುಕಿದರು.

ಆ ಬಳಿಕ ತಕ್ಷಣ ಎಚ್ಚೆತ್ತ ಸಚಿವರು ಈ ವರ್ಷ ಮೂವರು ಗಣ್ಯರಿಗೆ ರಾಜ್ಯೋತ್ಸವ ನೀಡಲಾಗಿದೆ ಎಂದು ತಪ್ಪು ಸರಿಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News