×
Ad

ಡಿಕೆ ಶಿವಕುಮಾರ್‌ ಅವರನ್ನು ಮುಂದಿನ ಸಿಎಂ ಎನ್ನುವುದರಲ್ಲಿ ತಪ್ಪಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

Update: 2025-02-04 21:26 IST

ಸತೀಶ್‌ ಜಾರಕಿಹೊಳಿ

ಬೆಳಗಾವಿ: ಡಿಕೆ ಶಿವಕುಮಾರ್‌ ಮುಂದಿನ ಸಿಎಂ ಎಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದ್ದಾರೆ.

ಡಿಕೆ ಶಿವಕುಮಾರ್‌ ಆಪ್ತ ಶಾಸಕರು ಹಾಗೂ ಬೆಂಬಲಿಗರು ಡಿಕೆಶಿಯನ್ನು ಮುಂದಿನ ಸಿಎಂ ಎಂದು ಹೇಳುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಗೆ ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

ದಲಿತ ಶಾಸಕರ ಗುಂಪು ದಿಲ್ಲಿಗೆ ಹೋಗುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ದಿಲ್ಲಿಗೆ ಹೋಗುತ್ತೇನೆ ಎಂದವರು ಯಾರು? ಹಾಗೇನಾದರೂ ಹೋಗುವುದಾದರೆ ಮಾಧ್ಯಮದವರನ್ನು ಕರೆದು ನಾನೇ ತಿಳಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತಾಡಬಾರದೆಂದು ಹೈಕಮಾಂಡ್‌ ನೀಡಿರುವ ಆದೇಶದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʼಪಕ್ಷಕ್ಕೆ ಹಾನಿಯಾಗಬಾರದೆಂದು ಹೈಕಮಾಂಡ್‌ ಆ ರೀತಿ ಎಚ್ಚರಿಸಿದೆʼ ಎಂದಿದ್ದಾರೆ.

ಮುಂದಿನ ಮುಖ್ಯಮಂತ್ರಿ ಆಗಬೇಕೆಂಬ ಬಯಕೆಯನ್ನು ಸಚಿವ ಜಾರಕಿಹೊಳಿ ಕೂಡಾ ಈ ಹಿಂದೆ ವ್ಯಕ್ತಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News