×
Ad

ಕುಂದಾಪುರ: ಸಾಕಿದ ಗಂಡು ಕರು ಮಾಂಸಕ್ಕಾಗಿ ವಧೆ; ಇಬ್ಬರ ಬಂಧನ

Update: 2023-10-13 14:51 IST

ಗಂಗೊಳ್ಳಿ, ಅ.13: ನಾಡಾ ಗ್ರಾಮದ ಬಳಿ ಜಾನುವಾರುವನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದ ಇಬ್ಬರನ್ನು ಗಂಗೊಳ್ಳಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ಶೀನ ಹಾಗೂ ಗಜೇಂದ್ರ ಎಂದು ಗುರುತಿಸಲಾಗಿದೆ. ಅ.11ರಂದು ಸಂಜೆ ಸುಧೀರ್ ಎಂಬಾತನ ಜೊತೆಗೆ ಸೇರಿ ತಾವು ಸಾಕಿದ ಗಂಡು ಕರುವನ್ನು ವಧೆ ಮಾಡಿರುವುದಾಗಿ ವಿಚಾರಣೆ ಸಂದರ್ಭ ಆರೋಪಿಗಳು  ತಿಳಿಸಿದ್ದಾರೆ ಎನ್ನಲಾಗಿದೆ.

ಸ್ಥಳದಲ್ಲಿದ್ದ ಜಾನುವಾರಿನ ಮಾಂಸ, ದೇಹದ ಭಾಗಗಳು, ಪಾಲಿಥಿನ್ ಚೀಲ, ಕಬ್ಬಿಣದ ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News