×
Ad

ಮಾರಕಾಸ್ತ್ರಗಳಿಂದ ಯುವಕನ‌ ಹತ್ಯೆ; ಆರೋಪಿಗಳು ಪರಾರಿ

Update: 2023-09-27 11:50 IST

ಹತ್ಯೆಗೀಡಾದ ಯುವಕ ಮೌಲಾ ಅಲಿ

ಹುಬ್ಬಳ್ಳಿ: ಹಾಡ ಹಗಲೇ ಮಾರಕಾಸ್ತ್ರಗಳಿಂದ ಯುವಕನ‌ನ್ನು ಹತ್ಯೆಗೈದ ಘಟನೆ ಸಿಲ್ವರ್ ಟೌನ್‌ನಲ್ಲಿ ನಡೆದಿದೆ.

 ಹತ್ಯೆಗೀಡಾದ ಯುವಕನನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮರಗಡಿ ಗ್ರಾಮದ ನಿವಾಸಿ ಮೌಲಾ ಅಲಿ(24) ಎಂದು ಗುರುತಿಸಲಾಗಿದೆ.

 ಹುಬ್ಬಳ್ಳಿಗೆ ಗಾರೆ ಕೆಲಸ ಮಾಡಲು ಬಂದಿದ್ದ ಈತನನ್ನು ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿಯೇ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.

 ಸ್ಥಳಕ್ಕೆ ಗೋಕುಲ ರೋಡ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News