×
Ad

ಬೈಕಿನಲ್ಲಿ ಹೋದ ಯುವಕ ನಾಪತ್ತೆ

Update: 2023-08-19 19:07 IST

ಕಾರ್ಕಳ, ಆ.19: ಬೈಕಿನಲ್ಲಿ ಮನೆಯಿಂದ ಹೋದ ಯುವಕನೋರ್ವ ನಾಪತ್ತೆ ಯಾಗಿರುವ ಘಟನೆ ನಿಟ್ಟೆ ಗ್ರಾಮದ ಬೊರ್ಗಲ್ ಗುಡ್ಡೆ ಎಂಬಲ್ಲಿ ನಡೆದಿದೆ.

ಬೊರ್ಗಲ್ ಗುಡ್ಡೆ ನಿವಾಸಿ ಬಾಹುಬಲಿ ಇಂದ್ರ ಎಂಬವರ ಮಗ ಸಂಪತ್ ಕುಮಾರ್ ಜೈನ್(34) ಎಂಬವರು ಆ.18ರಂದು ಮಧ್ಯಾಹ್ನ ಮನೆಯಿಂದ ತನ್ನ ಬೈಕಿನಲ್ಲಿ ಕಾರ್ಕಳ ಕಡೆಗೆ ಹೋದವರು ವಾಪಾಸ್ಸು ಬಾರದೆ ನಾಪತ್ತೆ ಯಾಗಿದ್ದಾರೆ. ಸಂಪತ್ ಮೊಬೈಲ್ ಸ್ವಿಚ್ ಆಗಿದ್ದು, ಮನೆಯಿಂದ ಹೋಗುವಾಗ ನಸು ಕಂದು ಬಣ್ಣದ ಟೀ ಶರ್ಟ್ ಮತ್ತು ಗ್ರೇ ಬಣ್ಣದ ಬರ್ಮುಡ ಧರಿಸಿದ್ದರು.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News