×
Ad

ಕಾರ್ಕಳ| ಎಂಆರ್‌ಪಿಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು

Update: 2025-01-06 20:49 IST

ಕಾರ್ಕಳ, ಜ.6: ಎಂಆರ್‌ಪಿಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಲ್ಲಡ್ಕ ಗ್ರಾಮದ ಸುಚಿತ್ (29) ಉದ್ಯೋಗ ಹುಡುಕುತ್ತಿದ್ದು, ಅವಿನಾಶ್ ಎಂಬಾತ ತನ್ನ ಮಂಗಳೂರು ಕದ್ರಿಯಲ್ಲಿರುವ ಸನ್ನಿಧಿ ಇಂಟಿರಿಯರ್ ಡಿಸೈನ್ ನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಸುಚಿತ್ ಗೆಳತಿಯ ಮೂಲಕ ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ ಎಂದು ಹೇಳಿಸಿದ್ದನು.

ಈ ಬಗ್ಗೆ ಅವಿನಾಶ್‌ನೊಂದಿಗೆ ಸುಚಿತ್ ಮಾತನಾಡಿದ್ದು, ಆಗ ಅವಿನಾಶ್ 1,05,600ರೂ. ಹಣ ಕೊಡಬೇಕು ಎಂದು ತಿಳಿಸಿದ್ದನು ಮತ್ತು ಡಿ.13ರಂದು ಕೆಲಸ ಕೊಡಿಸುವುದಾಗಿ ನಂಬಿಸಿದ್ದನು.

ಅದರಂತೆ ಸುಚಿತ್ ನ.18ರಿಂದ ಡಿ.26ರವರೆಗೆ ಆನ್‌ಲೈನ್ ಮೂಲಕ ಮತ್ತು 20,000ರೂ. ಹಣವನ್ನು ನಗದಾಗಿ ಅವಿನಾಶ್‌ಗೆ ಪಾವತಿಸಿದ್ದನು. ಆದರೆ ಅವಿನಾಶ್ ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 1,05,600ರೂ. ಪಡೆದುಕೊಂಡು ಕೆಲಸವನ್ನು ಕೊಡಿಸದೇ ಮೋಸ ಮಾಡಿರುವುದಾಗಿ ದೂರಲಾಗಿದೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News