×
Ad

ಕಾರ್ಕಳ: ಬಸ್ಸಿನಿಂದ ಬಿದ್ದು ವಿದ್ಯಾರ್ಥಿ ಮೃತ್ಯು

Update: 2024-08-21 21:41 IST

ಕಾರ್ಕಳ, ಆ.21: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯೊಬ್ಬರು ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಆ.21ರಂದು ಬೆಳಗ್ಗೆ ನಿಟ್ಟೆ ಕಾಲೇಜ್ ಬಳಿ ನಡೆದಿದೆ.

ಮೃತರನ್ನು ಮಾಳ ಗ್ರಾಮದ ಜನಿತ್ ಶೆಟ್ಟಿ(20) ಎಂದು ಗುರುತಿಸಲಾಗಿದೆ. ನಿಟ್ಟೆ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿಯಾಗಿರುವ ಜನಿತ್, ಕಾಲೇಜಿಗೆ ತೆರಳಲು ಪುಲ್ಕೇರಿಯಲ್ಲಿ ಬಸ್ ಹತ್ತಿದ್ದು, ನಿಟ್ಟೆ ಕಾಲೇಜ್ ಬಳಿಯ ಹಂಪ್ಸ್ ಬಳಿ ಬಸ್ ಹೋಗುತ್ತಿದ್ದಂತೆ ಚಾಲಕ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಬಸ್ಸಿನಲ್ಲಿದ್ದ ಜನಿತ್ ಮುಂದಿನ ಬಾಗಿಲಿನ ಮೂಲಕ ರಸ್ತೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News