×
Ad

ದ್ವಿತೀಯ ಪಿಯು ಪರೀಕ್ಷೆ: ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ

Update: 2024-04-11 12:44 IST

ಕಾರ್ಕಳ, ಎ.11: ಪ್ರಸಕ್ತ ಸಾಲಿನ ದ್ವೀತೀಯ ಪಿಯುಸಿ ಪರೀಕ್ಷೆಯಲ್ಲಿ ಕಾರ್ಕಳ ಗಣಿತ ನಗರದ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ ಕಾಲೇಜಿನ ಸಮ್ಯಕ್ ಆರ್. ಪ್ರಭು 595 ಅಂಕ ಹಾಗೂ ವಾಣಿಜ್ಯ ವಿಭಾಗದಲ್ಲಿ ಚೈತ್ರಾ ಕಾಮತ್ 594 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 4ನೇ ಸ್ಥಾನಿಗಳಾಗಿದ್ದಾರೆ.

ವಿಜ್ಞಾನ ವಿಭಾಗ:

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ ಒಟ್ಟು 689 ವಿದ್ಯಾರ್ಥಿಗಳಲ್ಲಿ 663 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ. ಶೇ.99ಕ್ಕಿಂತ ಅಧಿಕ 4 ವಿದ್ಯಾರ್ಥಿಗಳು, ಶೇ.98ಕ್ಕಿಂತ ಅಧಿಕ 36 ವಿದ್ಯಾರ್ಥಿಗಳು, ಶೇ.97ಕ್ಕಿಂತ ಅಧಿಕ 125 ವಿದ್ಯಾರ್ಥಿಗಳು ಶೇ.96ಕ್ಕಿಂತ ಅಧಿಕ 234 ವಿದ್ಯಾರ್ಥಿಗಳು, ಶೇ.95ಕ್ಕಿಂತ ಅಧಿಕ 317 ವಿದ್ಯಾರ್ಥಿಗಳು, ಶೇ.90ಕ್ಕಿಂತ ಅಧಿಕ 579 ವಿದ್ಯಾರ್ಥಿಗಳು ಅಂಕಗಳನ್ನು ಗಳಿಸಿದ್ದಾರೆ.

ಸಮ್ಯಕ್ ಆರ್ ಪ್ರಭು 595 ಅಂಕ ಗಳಿಸಿ ರಾಜ್ಯಕ್ಕೆ 4ನೇ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಖುಷಿ ಎಸ್. ಹೆಗ್ಡೆ ಮತ್ತು ಸಂಜನಾ ಪಟಗಾರ್ 954 (5ನೇ ಸ್ಥಾನ) ಅಂಕಗಳನ್ನು ಗಳಿಸಿದ್ದಾರೆ. ಉಳಿದಂತೆ ಚಿನ್ಮಯ್ಎ ಸ್.ದೇಶಪಾಂಡೆ 593, ರೋಶ್ನಿ ಎಂ.ಪಿ. 593, ಪ್ರಣವ್ ಕುಮಾರ್ ಭಂಡಿ 592, ರಕ್ಷಣ್ ಆರ್ 592, ಅಮೃತ ಶಾಂತರಾಮ್ ಶೆಟ್ಟಿ 592, ಶ್ರೀಧ ಕಾಮತ್ 592, ಚಿನ್ಮಯ್ ಎಂ.ಬಿ. 591, ಕೃಷ್ ಎಸ್. ಕೆ. 591, ಕೃಷ್ಣ ಗಣಪತಿ ಭಟ್ 591, ಸಂಪದ ಇಂಚಾಲ್ 591, ಸಂಜನಾ ಆರ್. ರಾವ್ 591, ತನ್ಮಯ್ ಶೆಟ್ಟಿ 591, ತಿಲಕ್ ಚಂದ್ರ 591, ಬಿಪಿನ್ ಜೈನ್ 591, ನಿಧಿ ಪಿ. ಶರ್ಮಾ 591, ಕೆ.ಅನಿರುದ್ಧ್ ಕಾಮತ್ 590, ವೈಭವ್ ವಾಲಿ 590, ಭಾಗ್ಯಲಕ್ಮೀ ಶೆಟ್ಟಿ 590, ಚಂದನ್ 589, ಚಂದನಾ ಗಂಗಾಧರ್ ನಾಯಕ್ 589, ಸಮೀಕ್ಷಾ ಶಿವ ಶಂಕರ್ 589, ಸಮ್ಮಿತ್ ಯು.ಕೆ. 589, ಆಧ್ಯಾ ವಿ. ಬಲ್ಲು 589, ಅಮೃತ್ ಆರ್. 589, ಆರ್ಯ ಎಂ.ಜಿ. 589, ಶ್ರೇಯಸ್ ಎಸ್. 589, ಆರ್.ಎಚ್.ಶ್ರಾವಣಿ ತಂತ್ರಿ 589 ಹಾಗೂ ರಿಯಾ ಆಳ್ವ 589 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗ :

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಒಟ್ಟು 57 ವಿದ್ಯಾರ್ಥಿಗಳಲ್ಲಿ 49 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶೇ.98ಕ್ಕಿಂತ ಅಧಿಕ 6 ವಿದ್ಯಾರ್ಥಿಗಳು, ಶೇ.96ಕ್ಕಿಂತ ಅಧಿಕ 19 ವಿದ್ಯಾರ್ಥಿಗಳು, ಶೇ.95ಕ್ಕಿಂತ ಅಧಿಕ 25 ವಿದ್ಯಾರ್ಥಿಗಳು, ಶೇ.90ಗಿಂತ ಅಧಿಕ 40 ವಿದ್ಯಾರ್ಥಿಗಳು ಅಂಕಗಳನ್ನು ಗಳಿಸಿದ್ದಾರೆ. ಚೈತ್ರಾ ಕಾಮತ್ ೫೯೪ ಅಂಕ ಗಳಿಸಿ ರಾಜ್ಯಕ್ಕೆ 4ನೇ ಸ್ಥಾನಿಯಾಗಿದ್ದಾರೆ.

ಉಳಿದಂತೆ ಶ್ರವಣ್ 590 ಅಂಕ, ಪೂಜಾರಿ ಶ್ರೇಯಾ ಪ್ರಶಾಂತ್ 590, ಸುವಿಕ್ಷಾ ಎಸ್. ಶೆಟ್ಟಿ 588, ವೈಷ್ಣವಿ ಶೆಣೈ 588, ಶ್ರಾವಣಿ 588 ಸುಜಲ್ ಡಿ. ಹೆಗ್ಡೆ 587, ಸಮಿಯಾ ಎಸ್. ಹೆಗ್ಡೆ 586, ಸನ್ನಿಧಿ ಶೆಟ್ಟಿ 586, ಕೀರ್ತನಾ ರಾವ್ 585, ಪ್ರಣಮ್ ಕರ್ಕೆರ 584, ದಿಶಾ ಡಿ. ಪೂಜಾರಿ 582, ಹಯತ್ ನಾಯಕ್ 582 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್‌ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News