×
Ad

ಶಂಕರನಾರಾಯಣ: ರಸ್ತೆ ಅಪಘಾತ; ಬೈಕ್ ಸವಾರ ಮೃತ್ಯು

Update: 2024-11-26 22:26 IST

ಶಂಕರನಾರಾಯಣ, ನ.26: ಹೆಬ್ರಿ ನೆಲ್ಲಿಕಟ್ಟೆಯಿಂದ ಜಡ್ಕಲ್‌ಗೆ ತೆರಳುತಿದ್ದ ಬೈಕ್ ಸವಾರರೊಬ್ಬರು ಸೋಮವಾರ ಅಂಪಾರು ಗ್ರಾಮದ ತಲಕಲ್ ಗುಡ್ಡೆ ಎಂಬಲ್ಲಿ ಮೋಟಾರು ಸೈಕಲ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ತಲೆಗೆ ತೀವ್ರ ರೀತಿಯ ಗಾಯವಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತರನ್ನು ಹೆಬ್ರಿ ನೆಲ್ಲಿಕಟ್ಟೆಯ ಮನೋಜ್ (48) ಎಂದು ಗುರುತಿಸಲಾಗಿದೆ. ರಸ್ತೆಗೆ ಬಿದ್ದ ಮನೋಜ್‌ರನ್ನು ಅವರೊಂದಿಗೆ ಇನ್ನೊಂದು ಬೈಕ್‌ನಲ್ಲಿ ಬರುತಿದ್ದ ಕೆ.ಕೆ.ಸಾಜು ಹಾಗೂ ಇತರರು ಚಿಕಿತ್ಸೆಗಾಗಿ ಮೊದಲು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟರು. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News