ಸರಕಾರಿ ಬಸ್ ಪ್ರಯಾಣ ದರ ಹೆಚ್ಚಳ ವಿರೋಧಿಸಿ ಸಿಪಿಎಂ ಪ್ರತಿಭಟನೆ
ಕುಂದಾಪುರ, ಜ.6: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಏರಿಕೆ ಮಾಡಿರುವ ಸರಕಾರದ ಕ್ರಮವನ್ನು ಖಂಡಿಸಿ ಸಿಪಿಎಂ ಪಕ್ಷದ ನೇತೃತ್ವದಲ್ಲಿ ಇಂದು ವಂಡ್ಸೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕೇಂದ್ರ ಸರಕಾರದ ಬೆಲೆಯೇರಿಕೆ ನೀತಿಯಿಂದಾಗಿ ಜನರು ಈಗಾಗಲೇ ಬದುಕು ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ಇದರ ಮಧ್ಯೆಯೇ ರಾಜ್ಯ ಸರಕಾರ ಬಡವರ ಜೀವನಾಡಿಯಾದ ಸರಕಾರಿ ಬಸ್ಗಳ ಪ್ರಯಾಣ ದರ ಏರಿಕೆ ಮಾಡಿರುವುದು ಖಂಡನೀಯ ಎಂದು ಹೇಳಿದರು.
ಸರಕಾರಿ ಬಹುತೇಕ ಬಸ್ಗಳು ಗ್ರಾಮೀಣ ಪ್ರದೇಶಗಳಲ್ಲಿ ಓಡುತ್ತಿರುವುದ ರಿಂದ ನಷ್ಟಗಳು ಸಂಭವಿಸುತ್ತಿರುವುದು ಸಹಜ. ಆದರೆ ಸರಕಾರ ನಿಗಮಗಳಿಗೆ ಪೂರೈಕೆ ಮಾಡುವ ಇಂಧನದ ಮೇಲೆ ಸಬ್ಸಿಡಿ ನೀಡಬೇಕು ಮತ್ತು ತೆರಿಗೆ ಕಡಿಮೆ ಮಾಡ ಬೇಕು ಹಾಗೂ ಇಲೆಕ್ಟ್ರಿಕ್ ಬಸ್ಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಕೋವಿಡ್ ಸಂದರ್ಭದಲ್ಲಿ ಹೆಚ್ಚಿಸಿದ ಪ್ರಯಾಣ ದರ ಕೋವಿಡ್ ಅನಂತರ ಇಳಿಸಿಲ್ಲ. ಡೀಸೆಲ್ ದರ ಇಳಿಕೆಯಾದಾಗಲೂ ಕೂಡ ಪ್ರಯಾಣ ದರ ಇಳಿಕೆ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದ ಸುರೇಶ್ ಕಲ್ಲಾಗರ, ಈಗಾಗಲೇ ಖಾಸಗಿ ಬಸ್ಗಳು ಜಿಲ್ಲೆಗಳಲ್ಲಿ ಹಾಗೂ ರಾಜ್ಯಗಳಲ್ಲಿ ದುಬಾರಿ ಪ್ರಯಾಣ ದರ ವಸೂಲಿ ಮಾಡುತ್ತಿರುವುದರಿಂದ ದರ ಹೆಚ್ಚಳಕ್ಕೆ ಸರಕಾರ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡರಾದ ಕೆ.ಶಂಕರ, ಭಾಸ್ಕರ್ ಶಾರ್ಕೆ, ಪ್ರಭಾಕರ ಗಾಣಿಗ, ನೇತ್ರಾವತಿ, ಗುಲಾಬಿ, ಗಿರಿಜಾ, ಮೂಕಾಂಬಿಕಾ, ಕೇಶವ ಮೊದಲಾದವರು ಉಪಸ್ಥಿತರಿದ್ದರು.
‘ಖಾಸಗಿ ಬಸ್ ಪ್ರಯಾಣ ದರ ಏರಿಕೆಗೆ ಸರಕಾರ ಅವಕಾಶ ನೀಡಬಾರದು. ಖಾಸಗಿ ಬಸ್ ಮಾಲಕರು ಸರಕಾರಿ ಬಸ್ಗಳ ಪ್ರಯಾಣ ದರ ನೆಪವಾಗಿಟ್ಟು ಕೊಂಡು ಪ್ರಯಾಣ ದರ ಏರಿಕೆ ಮಾಡಬಾರದು. ಈಗಾಗಲೇ ಹಬ್ಬದ ದಿನಗಳಲ್ಲಿ ಮನಸ್ಸೋ ಯಿಚ್ಚೆ, ಕಾನೂನು ಬಾಹಿರವಾಗಿ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇದು ಸರಕಾರಕ್ಕೆ ಗೊತ್ತಿದ್ದರೂ ಖಾಸಗೀ ಬಸ್ಗಳ ಮಾಲೀಕರ ಮೇಲೆ ಯಾವುದೇ ಕ್ರಮ ವಹಿಸಿಲ್ಲ’
-ಸುರೇಶ್ ಕಲ್ಲಾಗರ್, ಕಾರ್ಯದರ್ಶಿ ಸಿಪಿಎಂ ಉಡುಪಿ ಜಿಲ್ಲೆ