×
Ad

ಎಂಡೋ ಬಾಧಿತ ಕುಟುಂಬದ ಜೊತೆ ಈದ್ ಆಚರಣೆ

Update: 2025-04-01 21:05 IST

ಕುಂದಾಪುರ, ಎ.1: ಚಿತ್ತೂರು ಮುಸ್ಲಿಂ ಬಾಂಧವರು, ಈದುಲ್ ಫಿತ್ರ್ ಹಬ್ಬವನ್ನು ಎಂಡೋ ಸಲ್ಫಾನ್ ಬಾಧಿತ ಕುಟುಂಬದ ನಿವಾಸಕ್ಕೆ ತೆರಳಿ ಕಿಟ್, ಹಣ್ಣು-ಹಂಪಲು, ಪಾನಿಯ ನೀಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

ಆಲೂರು ಗ್ರಾಮದ ಹೊಯ್ಯಾಣ ಎಂಬಲ್ಲಿ ಸುಮಾರು 20 ವರ್ಷಗಳಿಂದ ಎಂಡೋ ಸಲ್ಫಾನ್ ಪೀಡಿತರಾಗಿ ಹೊರ ಜಗತ್ತನ್ನೇ ಕಾಣದೆ ಮನೆಯೊಳಗಿದ್ದ ಉಷಾ ಮತ್ತು ಉದಯ ಎಂಬ ಅಣ್ಣ-ತಂಗಿಯರ ಬದುಕಿನ ಕರಾಳ ಕಥೆಯನ್ನು ಕೇಳಿ ತಿಳಿದ ಮುಸ್ಲೀಂ ಬಾಂಧವರು ಈ ಬಾರಿ ಹಬ್ಬವನ್ನು ಅವರೊಂದಿಗೆ ಆಚರಿಸಿಕೊಂಡರು.

ಅಬ್ದುಲ್ ಸಲಾಂ ಚಿತ್ತೂರು ಮತ್ತವರ ತಂಡದ ಜೊತೆ ಮಾತನಾಡಿದ ಅವರ ತಾಯಿ, ಗ್ರಾ.ಪಂ ವತಿಯಿಂದ ಕುಡಿಯುವ ನೀರಿಗಾಗಿ ಬಾವಿ ಒದಗಿಸಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವದಿಂದಾಗಿ ಎರಡು ಮಕ್ಕಳನ್ನು ಆರೈಕೆ ಮಾಡುವುದರಲ್ಲಿ ಬಹಳಷ್ಟು ಕಷ್ಟವಾಗುತ್ತದೆ. ತುಂಬಾ ದೂರ ಹೋಗಿ ನೀರು ತರಬೇಕಾದ ಅನಿವಾರ್ಯತೆ ಬಗ್ಗೆ ಅಳಲನ್ನು ತೋಡಿ ಕೊಂಡರು.

ಈ ಸಂದರ್ಭದಲ್ಲಿ ತಂಡದಲ್ಲಿದ್ದ ಅಬ್ದುಲ್ ರೆಹಮಾನ್, ಜಯರಾಮ, ಮುಹಮ್ಮದ್, ಇಕ್ಬಾಲ್, ರಿಯಾಝ್, ಸುಲೇಮಾನ್, ಇರ್ಷಾದ್, ಶರ್ಫಾನ್ ತಂಡ ಒಟ್ಟಾಗಿ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News