×
Ad

ಉಡುಪಿ| ಹೊಡೆದಾಟ ಪ್ರಕರಣ: ಇಬ್ಬರು ವಶಕ್ಕೆ

Update: 2024-06-30 20:47 IST

ಹಿರಿಯಡ್ಕ: ಅಂಜಾರು ಗ್ರಾಮದ ಓಂತಿಬೆಟ್ಟು ಜಂಕ್ಷನ್ ಬಳಿ ಜೂ.29ರಂದು ರಾತ್ರಿ ವೇಳೆ ಗಲಾಟೆ ಮಾಡುತ್ತಿದ್ದ ಇಬ್ಬರನ್ನು ಹಿರಿಯಡ್ಕ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೊಮ್ಮಾರಬೆಟ್ಟು ಗ್ರಾಮದ ಸುನೀಲ್(51) ಹಾಗೂ ಓಂತಿಬೆಟ್ಟುವಿನ ಪದ್ಮನಾಭ(44) ಎಂಬವರು ಕಾರು ಹಾಗೂ ಬೈಕನ್ನು ರಸ್ತೆ ಮದ್ಯೆ ನಿಲ್ಲಿಸಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡುವ ರೀತಿಯಲ್ಲಿ ಹೊಡೆದಾಡಿ ಕೊಂಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News