×
Ad

ಉಡುಪಿ: ವೆಲ್ಫೇರ್ ಸೊಸೈಟಿಯ ವಾರ್ಷಿಕ ಮಹಾಸಭೆ

Update: 2023-09-23 18:09 IST

ಉಡುಪಿ, ಸೆ.23: ಉಡುಪಿ ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಉಡುಪಿ ಜಾಮಿಯಾ ಮಸೀದಿಯ ನೆಲ ಅಂತಸ್ತಿನಲ್ಲಿ ಇತ್ತೀಚೆಗೆ ನಡೆಯಿತು.

ಸೊಸೈಟಿಯ ಅಧ್ಯಕ್ಷ ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮಲ್ಪೆಜಾಮಿಯಾ ಮಸೀದಿಯ ಖತೀಬ್ ಇಮ್ರಾನುಲ್ಲಾ ಖಾನ್ ಮನ್ಸೂರಿ ಹಾಗೂ ಮಣಿಪಾಲ ಎಂಐಟಿಯ ಸಹಾಯಕ ಪ್ರಾಧ್ಯಾಪಕ ಡಾ. ಅಬ್ದುಲ್ ಅಝೀಝ್ ಮಾತನಾಡಿದರು.

ಉಡುಪಿ ಜಾಮಿಯಾ ಮಸೀದಿಯ ಅಧ್ಯಕ್ಷ ರಿಯಾಝ್ ಅಹ್ಮದ್, ವೆಲ್ಫೇರ್ ಸೊಸೈಟಿಯ ಉಪಾಧ್ಯಕ್ಷ ನಿಸಾರ್ ಅಹ್ಮದ್, ಕಾರ್ಯದರ್ಶಿ ಆರಿಫ್ ಕಾಶಿಂ ಮತ್ತು ಸಲಹೆಗಾರರಾದ ನರಸಿಂಹ ಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಾಫಿಝ್ ಯೂನುಸ್ ಕುರಾನ್ ಪಠಿಸಿದರು. ನಿರ್ದೇಶಕ ಜಿ.ಶುಐಬ್ ಅಹ್ಮದ್ ಮಲ್ಪೆ ಸ್ವಾಗತಿಸಿದರು. ರಯೀಸ್ ಅಹ್ಮದ್ ಆಮಂತ್ರಣ ಪತ್ರಿಕೆ ಓದಿ ದಾಖಲಿಸಿದರು. ಅನ್ವರ್ ಅಲಿ ಕಾಪು ವಾರ್ಷಿಕ ವರದಿಯನ್ನು ಓದಿದರು. ಇಕ್ಬಾಲ್ ಕಾಪು ವಂದಿಸಿ ದರು. ಜಿ.ಎಂ.ಶರೀಫ್ ಹೂಡೆ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News