×
Ad

ಭಟ್ಕಳ: ಅಲೆಯ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿದ ಮೀನುಗಾರಿಕಾ ಬೋಟ್

Update: 2024-09-07 12:57 IST

PC: facebook.com/publictv

ಭಟ್ಕಳ : ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಬಲವಾದ ಅಲೆಗಳಿಂದ ಮಲ್ಪೆಯ ಮೀನುಗಾರಿಕಾ ದೋಣಿಯೊಂದು ಭಟ್ಕಳ ಬಳಿಯ ಕರಾವಳಿಯಲ್ಲಿ ಬಂಡೆಗಳಿಗೆ ಢಿಕ್ಕಿ ಹೊಡೆದು ದೋಣಿಗೆ ಭಾರೀ ಹಾನಿಯಾಗಿದೆ ಎಂದು ವರದಿಯಾಗಿದೆ.

ಕಡಲತೀರದಲ್ಲಿ ಬಲವಾದ ಅಲೆಗಳ ಅಬ್ಬರಕ್ಕೆ ಮಲ್ಪೆ ಬಂದರಿಗೆ ಸೇರಿದ ದೋಣಿಯ ರೆಕ್ಕೆಯೊಳಗೆ ಮೀನುಗಾರಿಕಾ ಬಲೆ ಸಿಲುಕಿಕೊಂಡ ಪರಿಣಾಮ ಬೋಟ್ ಮುಂದಕ್ಕೆ ಸಾಗಲು ಸಾಧ್ಯವಾಗದೆ ಬೋಟ್ ಸಮುದ್ರದಲ್ಲಿ ಮುಳುಗುವ ಹಂತದಲ್ಲಿತ್ತು ಎನ್ನಲಾಗಿದೆ.

ಈ ದೋಣಿಯನ್ನು ಮುಳುಗದಂತೆ ರಕ್ಷಿಸಲು ಭಟ್ಕಳದಿಂದ ಬಂದ ಇನ್ನೊಂದು ಮೀನುಗಾರಿಕಾ ದೋಣಿಗೆ ಹಗ್ಗದಿಂದ ಕಟ್ಟಿ ಭಟ್ಕಳ ತಂಗಿನ ಗುಂಡಿ ಬಂದರಿನ ಬಳಿ ಎಳೆದು ತರಲಾಯಿತು. ಆದರೆ ಬಲವಾದ ಅಲೆಗಳಿಂದಾಗಿ ಕಟ್ಟಿದ ಹಗ್ಗಗಳು ಮುರಿದು ದಡದ ಉದ್ದಕ್ಕೂ ತಡೆಗೋಡೆಯಂತೆ ಕಾರ್ಯನಿರ್ವಹಿಸುವ ಬೃಹತ್ ಬಂಡೆಗಳಿಗೆ ದೋಣಿ ಡಿಕ್ಕಿ ಹೊಡೆದಿದೆ. ಇದರಿಂದ ದೋಣಿಗೆ ಸಾಕಷ್ಟು ಹಾನಿಯಾಗಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News