×
Ad

ವಿಜಯನಗರ | ಹಂಪಿಯಲ್ಲಿ ಚಿರತೆ ಪ್ರತ್ಯಕ್ಷ

Update: 2024-07-09 10:26 IST

ವಿಜಯನಗರ, ಜು.9: ಹೊಸಪೇಟೆ ತಾಲೂಕಿನ ಹಂಪಿಯ ಹೇಮಕೂಟದ ಬಳಿ ಗುಡ್ಡದ ಮೇಲೆ ಚಿರತೆ ಕಂಡುಬಂದಿದೆ.

ಹೇಮಕೂಟದ ಬಳಿ ಗುಡ್ಡದ ಮೇಲೆ ಸೋಮವಾರ ಸಂಜೆ ವೇಳೆ ಚಿರತೆ ಪ್ರತ್ಯಕ್ಷವಾಗಿದೆ. ಗುಡ್ಡದ ಮೇಲಿನ ದೊಡ್ಡ ಕಲ್ಲು ಬಂಡೆ ಏರಿ ಕುಳಿತಿದ್ದ ಚಿರತೆ ಸ್ಥಳೀಯ ನಿವಾಸಿಯೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೆಲ ದಿನಗಳ ಹಿಂದೆ ಹಂಪಿ ಮತ್ತು ಕನ್ನಡ ವಿವಿಯಲ್ಲಿ ಕರಡಿಗಳು ಜನ ನಿಬಿಡ ಪ್ರದೇಶದಲ್ಲಿ ಕಂಡು ಬಂದಿದ್ದವು. ಇದೀಗ ಚಿರತೆ ಪ್ರತ್ಯಕ್ಷಗೊಂಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News