ಬೆಳ್ತಂಗಡಿ: ಸುನ್ನೀ ಕೋ ಆರ್ಡಿನೇಶನ್ ಸಮಿತಿಯಿಂದ 'ಗ್ರ್ಯಾಂಡ್ ಹುಬ್ಬರ್ರಸೂಲ್ ಮಜ್ಲಿಸ್' ಕಾರ್ಯಕ್ರಮ
ಬೆಳ್ತಂಗಡಿ: ಸುನ್ನೀ ಕೋ-ಆರ್ಡಿನೇಶನ್ ಸಮಿತಿ, ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಪ್ರವಾದಿ ಪೈಗಂಬರ್ ಅವರ 1,500ನೇ ಜನ್ಮ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ 'ಗ್ರ್ಯಾಂಡ್ ಹುಬ್ಬುರ್ರಸೂಲ್ ಮಜ್ಲಿಸ್' ಕಾರ್ಯಕ್ರಮ ಸೆ.23ರಂದು ಗುರುವಾಯನಕೆರೆ ಮಂಜುಬೆಟ್ಟು ಎಫ್.ಎಂ. ಗಾರ್ಡನ್ ನಲ್ಲಿ ಜರುಗಿತು.
ಬುರ್ದಾ ಆಲಾಪನೆ, ನಅತ್ ಶರೀಫ್ ಆಲಾಪನೆ, ಮದ್ಹ್ ಗೀತೆಗಳ ಗಾಯನ, ಮೌಲಿದ್ ಪಾರಾಯಣ ಇತ್ಯಾದಿಗಳು ನಡೆದವು. ಜಾಮಿಯಾ ಸಅದಿಯಾ ಅರಬಿಯಾ ಕಾಲೇಜಿನ ಹಿರಿಯ ಮುದರ್ರಿಸ್ ಸ್ವಾಲಿಹ್ ಸಅದಿ ದುಆಗೈದರು.
ಸುನ್ನೀ ಕೋ ಆರ್ಡಿನೇಷನ್ ಸಮಿತಿಯ ಅಧ್ಯಕ್ಷ ಸೈಯದ್ ಸಾದಾತ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪಾಧ್ಯಕ್ಷ ಸೈಯದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ಮನ್ಶರ್, ಸೈಯದ್ ಉಜಿರೆ ತಂಙಳ್ (ಮಲ್ಜಅ), ಸೈಯದ್ ವಾದಿ ಇರ್ಫಾನ್ ತಂಙಳ್, ಸೈಯದ್ ಅಬ್ದುಸ್ಸಲಾಂ ತಂಙಳ್, ಸೈಯದ್ ಎಸ್.ಎಂ ತಂಙಳ್, ಸೈಯದ್ ಕರ್ಪಾಡಿ ತಂಙಳ್, ಸೈಯದ್ ವೇಣೂರು ತಂಙಳ್, ಶಹೀರ್ ತಂಙಳ್ ನಾವೂರು, ಸವಾದ್ ತಂಙಳ್ ಉಜಿರೆ, ಸಲೀಂ ತಂಙಳ್ ಸಬರಬೈಲು, ಮೆಹಬೂಬ್ ತಂಙಳ್ ಎರ್ಮಾಳ, ಡಾ.ಕಾವಳಕಟ್ಟೆ ಹಝ್ರತ್, ಅಬೂಸ್ವಾಲಿಹ್ ಉಸ್ತಾದ್ ಕಿಲ್ಲೂರು, ಕೃಷ್ಣಾಪುರ ಇಬ್ರಾಹೀಂ ಮುಸ್ಲಿಯಾರ್, ಯಾಕೂಬ್ ಉಸ್ತಾದ್ ಮದ್ದಡ್ಕ ಮತ್ತಿತರರು ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು.
ಆರಿಫ್ ಸಅದಿ ಬಳಗ ಮೌಲಿದ್ ಮತ್ತು ಮದ್ಹ್ ಆಲಾಪನೆ ನಡೆಸಿಕೊಟ್ಟಿತು.
ಡಾ. ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಶುಭಹಾರೈಸಿದರು.
ಸುನ್ನೀ ಕೋ ಆರ್ಡಿನೇಷನ್ ಕಮಿಟಿಯ ಕಾರ್ಯಾಧ್ಯಕ್ಷ ಜಿ.ಕೆ.ಉಮರ್ ಗುರುವಾಯನಕೆರೆ, ಕಾರ್ಯದರ್ಶಿ ಸಲೀಂ ಕನ್ಯಾಡಿ, ಕೋಶಾಧಿಕಾರಿ ಮುಹಮ್ಮದ್ ರಫಿ ಬೆಳ್ತಂಗಡಿ, ಪ್ರಮುಖರಾದ ಅಬ್ಬೋನು ಮದ್ದಡ್ಕ, ಅಬ್ಬಾಸ್ ಬಡ್ಲಡ್ಕ, ಬಿ.ಎಂ.ಹಮೀದ್ ಉಜಿರೆ, ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು, ಫಾರೂಕ್ ಸಖಾಫಿ ವೇಣೂರು, ಅಶ್ರಫ್ ಸಖಾಫಿ ಮಾಡಾವು, ಕೆ.ಕೆ.ಶಾಹುಲ್ ಹಮೀದ್, ಬಿ.ಎ.ನಝೀರ್, ಉಮರ್ಕುಂಞಿ ನಾಡ್ಜೆ, ಹಂಝ ಮದನಿ, ಅಬ್ದುರ್ರಹ್ಮಾನ್ ಸಖಾಫಿ ಆಲಂದಿಲ, ಅಲಿ ತುರ್ಕಳಿಕೆ, ಅಶ್ರಫ್ ಆಲಿಕುಂಞಿ ಮುಂಡಾಜೆ, ಆದಂ ಕುಪ್ಪೆಟ್ಟಿ, ಯಾಕೂಬ್ ಉರ್ವಾಲ್ ಪದವು, ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಚಾರ್ಮಾಡಿ ಹಸನಬ್ಬ, ಸಾದಿಕ್ ಮಾಸ್ಟರ್ ಮಲೆಬೆಟ್ಟು, ಶಾಕಿರ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ವಕ್ಫ್ ಜಿಲ್ಲಾ ಅಧಿಕಾರಿ ಅಬೂಬಕರ್ ಹಾಜಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಮಾಹಿತಿ ನೀಡಿದರು.