×
Ad

ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘವು1.75 ಕೋಟಿ ರೂ. ನಿವ್ವಳ ಲಾಭಾಂಶ ಗಳಿಸಿದೆ: ಕೃಷ್ಣ ಶೆಟ್ಟಿ

Update: 2024-09-13 21:31 IST

ಉಳ್ಳಾಲ: ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 808 ಕೋಟಿ ವ್ಯವಹಾರ ನಡೆಸಿ 1.75ಕೋಟಿ ನಿವ್ವಳ ಲಾಭಾಂಶ ಗಳಿಸಿ `ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದು ಕೋಟೆಕಾರ್ ವ್ಯವಸಾಯ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಹೇಳಿದರು.

ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ವರದಿ ಸಾಲಿನ ಅಂತ್ಯಕ್ಕೆ ಸಂಘವು 'ಎ' ತರಗತಿಯ 9600 ಸದಸ್ಯರನ್ನು ಹಾಗೂ 2.45 ಕೋಟಿ ರೂಪಾಯಿಗಳ ಪಾಲು ಬಂಡವಾಳ ಹೊಂದಿದೆ. 267 ಕೋಟಿ ಠೇವಣಿ ಸಂಗ್ರಹಿಸಿ, 357 ಕೋಟಿ ಠೇವಣಿ ಪಾವತಿಸಿ, ವರ್ಷಾಂತ್ಯಕ್ಕೆ 163 ಕೋಟಿ ಠೇವಣಿ ಹೊಂದುವ‌ ಮೂಲಕ ಕಳೆದ ವರ್ಷಾಂತ್ಯಕ್ಕಿಂತ 10 ಕೋಟಿ ಪ್ರಗತಿ ಸಾಧಿಸಿದೆ ಎಂದು ವಿವರಿಸಿದರು.

173 ಕೋಟಿ ಸಾಲ ವಿತರಿಸಿ, 193 ಕೋಟಿ ವಸೂಲಿ ಮಾಡುವ ಮೂಲಕ ಶೇ.98ಪ್ರಗತಿ ಸಾಧಿಸಿದೆ. 124 ಕೋಟಿ ಹೊರ ಸಾಲವಿದ್ದು ಆಡಿಟ್ ವರ್ಗೀಕರಣದಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ 'ಎ' ತರಗತಿ ಹೊಂದಿದೆ. ಸಂಘ ವಿವಿಧ ಹಣಕಾಸು ಸಂಸ್ಥೆಗಳಲ್ಲಿ 48 ಕೋಟಿ ಠೇವಣಿ ವಿನಿಯೋಗಿಸಿ, 10 ಕೋಟಿ ನಿಧಿ ಹೊಂದಿದೆ. ಸಂಘ ಷೇರುದಾರರಿಗೆ ಶೇ.25 ಡಿವಿಡೆಂಟ್ ನೀಡುತ್ತಾ ಬಂದಿದೆ.

ಅಡಿಕೆ ಬೆಳೆಗಾರರಿಗೆ ಕೆ.ಜಿ.ಗೆ 100 ರೂಪಾಯಿ ಸಹಾಯ ಧನದೊಂದಿಗೆ ಮೈಲು ತುತ್ತು ವಿತರಿಸುತ್ತಿದ್ದು ಪ್ರಸ್ತುತ ಸಾಲಿ ನಲ್ಲಿ 438 ರೈತರಿಗೆ 292500ರೂ ಸಬ್ಸಿಡಿ ನೀಡಲಾಗಿದೆ. ಶಾಲಾ ಮಕ್ಕಳಿಗೆ ಕಲಿಕಾ ಪರಿಕರ ವಿತರಣೆ, ಸಂಘದ ಕಾರ್ಯ ವ್ಯಾಪ್ತಿಗೊಳಪಟ್ಟ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಪಡೆದ ಪ್ರತಿ ಶಾಲೆಯ ಓರ್ವನಂತೆ 40 ವಿದ್ಯಾರ್ಥಿಗಳನ್ನು ಗೌರವಿಸಲಾಗಿದೆ. ಎಸ್ಸೆಸ್ಸೆಎಲ್ಸಿಯಲ್ಲಿ ಶೇ.100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗಿದೆ.

ಭತ್ತ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಕರೆಗೆ ಐದು ಸಾವಿರದಂತೆ 91 ರೈತರಿಗೆ 452000 ಪ್ರೋತ್ಸಾಹ ಧನ ನೀಡಲಾಗಿದೆ. ‌

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಅಬುಸಾಲಿ ಕೆ.ಬಿ., ನಿರ್ದೇಶಕರಾದ ಗಂಗಾಧರ ಉಳ್ಳಾಲ‌್, ಕೆ.ಕೃಷ್ಣಪ್ಪ ಸಾಲ್ಯಾನ್, ಉದಯ ಕುಮಾರ್ ಶೆಟ್ಟಿ, ಅರುಣ್ ಕುಮಾರ್ , ರಾಘವ ಆರ್.ಉಚ್ಚಿಲ್, ಪದ್ಮಾವತಿ ಎಸ್.ಶೆಟ್ಟಿ, ಸುರೇಖ ಚಂದ್ರಹಾಸ, ರಾಘವ ಉಚ್ಚಿಲ್, ನಾರಾಯಣ ತಲಪಾಡಿ, ಬಾಬು ನಾಯ್ಕ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ ಉಳ್ಳಾಲ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News