ವಿಜಯಪುರ ಜಿಲ್ಲಾಧಿಕಾರಿಯಾಗಿ ಡಾ.ಆನಂದ್.ಕೆ
Update: 2025-07-08 19:05 IST
ಡಾ. ಆನಂದ್ ಕೆ - ನರ್ವಾಡೆ ವಿನಾಯಕ್
ಮಂಗಳೂರು: ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಡಾ. ಆನಂದ್ ಕೆ. ಅವರಿಗೆ ವರ್ಗಾವಣೆಯಾಗಿದ್ದು, ವಿಜಯಪುರ ಜಿಲ್ಲಾಧಿಕಾರಿಯಾಗಿ ಡಾ. ಆನಂದ್ ಕೆ. ಅವರನ್ನು ಸರಕಾರ ನಿಯೋಜಿಸಿದೆ.
ಡಾ. ಆನಂದ್ ಕೆ ಅವರ ವರ್ಗಾವಣೆಯಿಂದ ತೆರವಾಗಲಿರುವ ದ.ಕ. ಜಿ.ಪಂ ಸಿಇಒ ಹುದ್ದೆಗೆ 2021ರ ಬ್ಯಾಚ್ನ ಐಎಎಸ್ ಅಧಿಕಾರಿ ಹಾಗೂ ಮಡಿಕೇರಿ ಉಪವಿಭಾಗದ ಹಿರಿಯ ಸಹಾಯಕ ಆಯುಕ್ತರಾಗಿರುವ ನರ್ವಾಡೆ ವಿನಾಯಕ್ ಕರ್ಭಾರಿ ಅವರನ್ನು ನಿಯೋಜಿಸಲಾಗಿದೆ.