×
Ad

ರಾವ್ ಆ್ಯಂಡ್ ರಾವ್ ಸರ್ಕಲ್ ಆಸುಪಾಸಿನ ವ್ಯಾಪಾರಿಗಳ ನಿಯೋಗ ಕಮಿಷನರ್‌ಗೆ ಮನವಿ

Update: 2023-08-22 18:25 IST

ಮಂಗಳೂರು: ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಪರಿಸರದಲ್ಲಿ ಪೊಲೀಸ್ ಇಲಾಖೆಯು ಮಾಡಿದ ವಾಹನ ಸಂಚಾರದ ಮಾರ್ಪಾಡಿನಿಂದ ಸ್ಥಳೀಯರು ವ್ಯಾಪಾರವನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ನೇತೃತ್ವದ ವ್ಯಾಪಾರಿಗಳ ನಿಯೋಗವು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಸಮಸ್ಯೆಗಳ ಪರಿಹಾರಕ್ಕಾಗಿ ಚರ್ಚೆ ನಡೆಸಿತು.

ಸುಮಾರು 480 ಅಂಗಡಿ ವ್ಯಾಪಾರರಿಗೆ ಶೇ.90ರಷ್ಟು ಕಡಿತವಾಗಿದೆ. ಹಾಗಾಗಿ ವ್ಯಾಪಾರಿಗಳ ಮತ್ತು ಜನರ ಹಿತದೃಷ್ಟಿ ಯಿಂದ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಈ ಸಂದರ್ಭ ಕಾರ್ಪೊರೇಟರ್ ಅಬ್ದುಲ್ಲತೀಫ್, ಇಕ್ಬಾಲ್, ಅಬ್ದುಲ್ ಖಾದರ್, ಜಯ ಶೆಟ್ಟಿ, ನಾಗರಾಜ್ ಮೆಡಿಕಲ್, ಹಮೀದ್, ಪ್ರಿತೇಶ್, ಸಾಕಿರ್, ನಿಜಾಮ್, ಸಲಾಂ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News