×
Ad

ಸುರತ್ಕಲ್‌ : ಸಿಡಿಲು ಬಡಿದು ಮನೆಗೆ ಹಾನಿ; ಇಬ್ಬರಿಗೆ ಗಾಯ

Update: 2025-10-19 08:05 IST

ಮಂಗಳೂರು:  ಶನಿವಾರ ರಾತ್ರಿ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಸುರತ್ಕಲ್‌ ನ ಮಧ್ಯ ಗ್ರಾಮದ ಮಾಧವ ನಗರದ ಬೇಬಿ ಎಂಬವರ‌ ಮನೆಗೆ ಸಿಡಿಲು ಬಡಿದು ಇಬ್ಬರು ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ವರದಿಯಾಗಿದೆ.

ಗಾಯಗೊಂಡವರನ್ನು ಲಾವಣ್ಯ (19)ಹಾಗೂ ಸೌಜನ್ಯ(16) ಎಂದು ಗುರುತಿಸಲಾಗಿದೆ.

ಈ ವೇಳೆ ಮನೆಯಲ್ಲಿ ಐದು ಮಂದಿ ಸದಸ್ಯರಿದ್ದರು, ಈ ಪೈಕಿ ಲಾವಣ್ಯ ಮತ್ತು ಸೌಜನ್ಯ ಅವರಿಗೆ ಸಣ್ಣಪುಟ್ಟಗಾಯಗಳಾಗಿದ್ದು ‌ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ‌ ಎಂದು ತಿಳಿದು ಬಂದಿದೆ.‌

ಘಟನೆಯಿಂದ ಮನೆಯ ಗೋಡೆ, ನೆಲಕ್ಕೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News