×
Ad

ಆರ್ಜಿ ಕರ್ ಆಸ್ಪತ್ರೆ ವಿವಾದ | ಬೇಡಿಕೆಗಳನ್ನು ಈಡೇರಿಸದಿದ್ದರೆ ಅಕ್ಟೋಬರ್ 22ರಂದು ಮುಷ್ಕರ: ವೈದ್ಯರ ಬೆದರಿಕೆ

Update: 2024-10-19 11:00 IST

Photo : PTI

ಕೋಲ್ಕತ್ತಾ: ತಮ್ಮ ಸಹೋದ್ಯೋಗಿ ಹತ್ಯೆಗೆ ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಅಕ್ಟೋಬರ್ 22ರಂದು ರಾಜ್ಯಾದ್ಯಂತ ಮುಷ್ಕರ ನಡೆಸಲಾಗುವುದು ಎಂದು ಶುಕ್ರವಾರ ಬೆದರಿಕೆ ಒಡ್ಡಿದ್ದಾರೆ

ನಾವು ಇತರ ರಾಜ್ಯಗಳಲ್ಲಿನ ಸಹೋದ್ಯೋಗಿಗಳೊಂದಿಗೂ ಮಾತುಕತೆ ನಡೆಸುತ್ತಿದ್ದು, ಆರ್ಜಿ ಕರ್ ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರವೂ ನಡೆಯುವ ಸಾಧ್ಯತೆ ಇದೆ ಎಂದು ಆರ್ಜಿ ಕರ್ ಆಸ್ಪತ್ರೆಯ ವೈದ್ಯರು ಸುಳಿವು ನೀಡಿದ್ದಾರೆ.

ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅಕ್ಟೋಬರ್ 21ರವರೆಗೆ ರಾಜ್ಯ ಸರಕಾರಕ್ಕೆ ನಮ್ಮ ಹಿರಿಯ ವೈದ್ಯರೊಂದಿಗೆ ಗಡುವು ನೀಡುತ್ತಿದ್ದೇವೆ ಎಂದು ಕಿರಿಯ ವೈದ್ಯಕೀಯ ಸಿಬ್ಬಂದಿಗಳು ತಿಳಿಸಿದ್ದಾರೆ.

“ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತುಕತೆಗೆ ಕುಳಿತುಕೊಳ್ಳಬೇಕು ಹಾಗೂ ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂಬುದು ನಮ್ಮ ಬಯಕೆಯಾಗಿದೆ” ಎಂದು ಹೋರಾಟ ನಡೆಸುತ್ತಿರುವ ಕಿರಿಯ ವೈದ್ಯರ ಪೈಕಿ ಒಬ್ಬರಾದ ದೇಬಶಿಶ್ ಹಲ್ದಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಇದಾಗದಿದ್ದರೆ, ಸರಕಾರದ ಮತ್ತು ಖಾಸಗಿ ಆಸ್ಪತ್ರೆಗಳ ಎಲ್ಲ ಕಿರಿಯ ಮತ್ತು ವೈದ್ಯರು ಮಂಗಳವಾರ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ” ಎಂದು ಕಿರಿಯ ಮತ್ತು ಹಿರಿಯ ವೈದ್ಯರ ನಡುವಿನ ಸಭೆಯ ನಂತರ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News