×
Ad

ನಾಯಿ ನಾಪತ್ತೆ: ತನ್ನ ಭದ್ರತಾ ಸಿಬ್ಬಂದಿಗಳನ್ನು ಅಮಾನತುಗೊಳಿಸಲು ಹಿರಿಯ ಪೊಲೀಸ್ ಅಧಿಕಾರಿಗೆ ಪತ್ರ ಬರೆದ ನ್ಯಾಯಾಧೀಶ!

Update: 2023-07-23 17:30 IST

ಸಾಂದರ್ಭಿಕ ಚಿತ್ರ | Photo: PTI

ದಿಲ್ಲಿ: ತನ್ನ ಮುದ್ದಿನ ನಾಯಿ ನಾಪತ್ತೆಯಾಗಿರುವುದಕ್ಕೆ ಕಾವಲುಗಾರರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ , ತನ್ನ ಅಧಿಕೃತ ನಿವಾಸದ ಬಳಿ ಭದ್ರತೆಗಾಗಿ ನಿಯೋಜಿಸಿರುವ ಭದ್ರತಾ ಸಿಬ್ಬಂದಿಗಳನ್ನು ಅಮಾನತುಗೊಳಿಸಬೇಕು ಎಂದು ದಿಲ್ಲಿ ಹೈಕೋರ್ಟ್ ಮಾಜಿ ನ್ಯಾಯಾಧೀಶರೊಬ್ಬರು ಅಧಿಕಾರಿಗೆ ಪತ್ರ ಬರೆದ ಘಟನೆ ನಡೆದಿದೆ.

ಆದರೆ, ನಂತರ ತಮ್ಮ ಬೇಡಿಕೆಯನ್ನು ಹಿಂಪಡೆದಿರುವ ನ್ಯಾ. ಗೌರಂಗ್ ಕಾಂತ್, ಭದ್ರತಾ ಸಿಬ್ಬಂದಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

“ಬಂಗಲೆಯ ದ್ವಾರವನ್ನು ಮುಚ್ಚದೆ, ನನ್ನ ಮುದ್ದಿನ ನಾಯಿಯ ಕಾಣೆಗೆ ಕಾರಣರಾಗಿರುವ ನನ್ನ ನಿವಾಸದ ಬಳಿ ನಿಯೋಜಿತಗೊಂಡಿದ್ದ ಭದ್ರತಾ ಸಿಬ್ಬಂದಿಗಳನ್ನು ಅಮಾನತುಗೊಳಿಸಬೇಕು” ಎಂದು ಕೋರಿ ಅವರು ನಗರದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರಿಗೆ ಪತ್ರ ಬರೆದಿದ್ದರು ಎಂದು ಶನಿವಾರ ದಿಲ್ಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗಷ್ಟೆ ನ್ಯಾ. ಗೌರಂಗ್ ಕಾಂತ್ ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News