ಕಲಬುರಗಿ: ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

Update: 2024-03-29 05:22 GMT

ಕಲಬುರಗಿ: ಪುಣೆ ಹಾಗೂ ಭುವನೇಶ್ವರ ರೈಲಿನಲ್ಲಿ ಗಾಂಜಾ ಸಾಗಾಣೆ ಮಾಡುತ್ತಿದ್ದ ಆರೋಪದಡಿ ಒರಿಸ್ಸಾ ಮೂಲದ ಇಬ್ಬರನ್ನು ಗುರುವಾರ ರಾತ್ರಿ ವಾಡಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಒರಿಸ್ಸಾದ ಗಜಪತಿ ಜಿಲ್ಲೆಯ ಲಾಕೀರ್ ಪೇಟ್ ಗ್ರಾಮದ ರಬಿಕುಣಿ ಮಲಿಕ್ (28) ಹಾಗೂ ಅಭಿಮನ್ಯು ಮಲಿಕ್ ದುಡ್ಲಾ (26) ಎಂದು ಗುರುತಿಸಲಾಗಿದೆ. ಬಂಧಿತರಿಂದ 22 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪೊಲೀಸರು ಪುಣೆ ಹಾಗೂ ಭುವನೇಶ್ವರ ರೈಲು ತಪಾಸಣೆ ಮಾಡಿದ ಈ ವೆಳೆ ಚೀಲದಲ್ಲಿ ಇರಿಸಿದ್ದ ಗಾಂಜಾ ಪತ್ತೆಯಾಗಿದೆ ಎದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News