×
Ad

ಭಾರತದ ಕಂಪ್ಯೂಟರ್ ವಿಜ್ಞಾನ ಶಿಕ್ಷಣದ 'ಪಿತಾಮಹ' ಪ್ರೊ.ರಾಜಾರಾಮನ್ ನಿಧನ

Update: 2025-11-09 07:48 IST

PC: x.com/shivanandkanavi

ಬೆಂಗಳೂರು: ಭಾರತದ ಕಂಪ್ಯೂಟರ್ ವಿಜ್ಞಾನ ಶಿಕ್ಷಣದ ಪಿತಾಮಹ ಎನಿಸಿಕೊಂಡಿದ್ದ ಪ್ರೊ. ವೈದ್ಯೇಶ್ವರನ್ ರಾಜಾರಾಮನ್ ತಮ್ಮ ಟಾಟಾನಗರ ನಿವಾಸದಲ್ಲಿ ಶನಿವಾರ ಕೊನೆಯುಸಿರೆಳೆದರ. ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರಿಗೆ 92 ವರ್ಷ ವಯಸ್ಸಾಗಿತ್ತು. ಟಿಸಿಎಸ್ನ ಮೊದಲ ಸಿಇಓ ಫರೂಕ್ ಚಂದ್ ಕೊಹ್ಲಿ ಹಾಗೂ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಸೇರಿದಂತೆ ಹಲವು ಮಂದಿ ರಾಜಾರಾಮನ್ ಅವರ ವಿದ್ಯಾರ್ಥಿಗಳಾಗಿದ್ದರು.

ಖರಗಪುರ ಐಐಟಿಯಲ್ಲಿ ಭಾರತದ ಮೊಟ್ಟಮೊದಲ ಔಪಚಾರಿಕ ಕಂಪ್ಯೂಟರ್ ವಿಜ್ಞಾನ ಆರಂಭಿಸುವಲ್ಲಿ ಅವರು ಪ್ರಧಾನ ಪಾತ್ರ ವಹಿಸಿ, ದೇಶದ ತಂತ್ರಜ್ಞಾನ ಕ್ರಾಂತಿಗೆ ನಾಂದಿ ಹಾಡಿದ್ದರು.

1933ರಲ್ಲಿ ಜನಿಸಿದ ಪ್ರೊ.ರಾಜಾರಾಮನ್, ಭಾರತದ ಕಂಪ್ಯೂಟರ್ ಕ್ಷೇತ್ರವನ್ನು ರೂಪಿಸಲು ಆರು ದಶಕಗಳ ಕಾಲ ಗಣನೀಯ ಸೇವೆ ಸಲ್ಲಿಸಿದ್ದರು.

"ನಾನು ಅರುವತ್ತರ ದಶಕದಲ್ಲಿ ಐಐಟಿ ಖರಗಪುರದಲ್ಲಿ ಅವರ ವಿದ್ಯಾರ್ಥಿಯಾಗಿದ್ದೆ. ಅವರೊಬ್ಬ ಪ್ರಾಜ್ಞ ಹಾಗೂ ವಿದ್ವಾಂಸ. ಅವರ ಪತ್ನಿ ಧರ್ಮ ಕೂಡಾ ಐಐಟಿಕೆಯ ಇಇ ವಿಭಾಗದ ಪ್ರತಿ ವಿದ್ಯಾರ್ಥಿಗಳ ಪೋಷಕಿಯಾಗಿದ್ದರು. ಯಾವುದೇ ಬಗೆಯ ಮಾರ್ಗದರ್ಶನಕ್ಕೆ ಅವರು ಸದಾ ಲಭ್ಯರಿದ್ದರು" ಎಂದು ನಾರಾಯಣಮೂರ್ತಿ ಹೇಳಿದ್ದಾರೆ.

ಬೆಂಗಳೂರು ಐಐಎಸ್ಸಿಯಲ್ಲಿ 1982ರಿಂದ 1994ರವರೆಗೆ ಸೂಪರ್ ಕಂಪ್ಯಟರ್ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದ ಪ್ರೊ.ರಾಜಾರಾಮನ್ ಭಾರತದ ಸೂಪರ್ಕಂಪ್ಯೂಟಿಂಗ್ ಮತ್ತು ಪರ್ಯಾಯ ಕಂಪ್ಯೂಟಿಕ್ ಸಾಮಥ್ರ್ಯ ಅಭಿವೃದ್ಧಿಗೆ ಕಾರಣೀಕರ್ತರಾಗಿದ್ದರು. ಈ ಮೂಲಕ ಅತ್ಯಾಧುನಿಕ ಕಂಪ್ಯೂಟಿಂಗ್ ಸಂಪನ್ಮೂಲದ ಸಂಶೋಧಶನಾ ಸಂಸ್ಥೆಗಳನ್ನು ಬಲಪಡಿಸಲು ಕೊಡುಗೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News