×
Ad

ಕಾರ್ಕಳದಲ್ಲಿ ಪತ್ನಿ,ಮಗಳನ್ನು ಬಾವಿಗೆ ತಳ್ಳಿ ಪತಿ ಅರ್ಚಕ ಆತ್ಮಹತ್ಯೆ

Update: 2015-12-18 15:01 IST

ಪತ್ನಿ ಹಾಗೂ ಮಗಳನ್ನು ಬಾವಿಗೆ ತಳ್ಳಿದ ಬಳಿಕ ಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಅನಂತಶಯನ ದೇವಸ್ಥಾನದ ಬಳಿ ಶುಕ್ರವಾರ ನಡೆದಿದೆ.
ಅರ್ಚಕ ಗಣಪತಿ ಜೋಯಿಷ (50)  ಮೃತಪಟ್ಟಿದ್ದಾರೆ. ಆದರೆ ಅವರ ಪತ್ನಿ ಮತ್ತು ಮಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಾವಿಯಿಂದ ಎತ್ತಿ ರಕ್ಷಿಸಿದ್ದಾರೆ.
ಅರ್ಚಕ ಗಣಪತಿ ಜೋಯಿಷ ಅವರು ತನ್ನ ಪತ್ನಿ ಶ್ಯಾಮಲಾ(42) ಮತ್ತು ಪುತ್ರಿ ರಶ್ಮಿ(18) ಎಂಬವರನ್ನು ದೇವಸ್ಥಾನದ ಬಳಿಯ ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News