ಎಂಡೋ ಸಂತ್ರಸ್ತರಿಂದ ಜಾಥಾ

Update: 2016-01-01 18:48 GMT

ಕಾಸರಗೋಡು, ಜ.1: ಹಲವು ಬೇಡಿಕೆಗಳನ್ನು ಮುಂದಿಟ್ಟು ಎಂಡೋಸಲ್ಫಾನ್ ಸಂತ್ರಸ್ತರು ಶುಕ್ರವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ನಡೆಸಿದರು.
 ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಾಚರಿಸುತ್ತಿರುವ ಎಂಡೋಸಲ್ಫಾನ್ ಸೆಲ್ನ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಸಂತ್ರಸ್ತರ ಬ್ಯಾಂಕ್ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಹಾಗೂ ಎಂಡೋಸಲ್ಫಾನ್ ಸೆಲ್ ಅಧಿಕಾರಿಗಳು ಸಂತ್ರಸ್ತರ ಬಗ್ಗೆ ತೋರುತ್ತಿರುವ ನಿರ್ಲಕ್ಷವನ್ನು ಪ್ರತಿಭಟಿಸಿ ಜಾಥಾ ನಡೆಸಲಾಯಿತು.
  ಜಾಥಾಕ್ಕೆ ಅಂಬಲತ್ತರ ಕುಂಞಿಕೃಷ್ಣನ್, ಮುರಳಿ ಮಾಸ್ಟರ್, ಶಶಿಧರ ಗೋಳಿಕಟ್ಟೆ, ನಾರಾಯಣ ಪೆರಿಯ, ಮುನಿಸಾಮೊದಲಾದವರು ನೇತೃತ್ವ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News