ಅಸಹಿಷ್ಣುತೆ ಹೆಚ್ಚಳ: ಪೂಜಾರಿ ಕಳವಳ

Update: 2016-01-01 18:49 GMT

ಮಂಗಳೂರು, ಜ.1: ದೇಶದಲ್ಲಿ ಅಸಹಿ ಷ್ಣುತೆ ಹೆಚ್ಚಿದ್ದು, ಜನರು ಮಾತ ನಾಡಲು ಹೆದರುವಂತಹ ಪರಿಸ್ಥಿತಿ ಇದೆ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕಳವಳ ವ್ಯಕ್ತ ಪಡಿಸಿದರು.
 ನಗರದಲ್ಲಿ ಇಂದು ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ಸಂವಿ ಧಾನವು ಇತಿಮಿತಿಗಳೊಂದಿಗೆ ವಾಕ್ ಸ್ವಾತಂತ್ರ ನೀಡಿದ್ದು, ಅದರಂತೆ ಅಭಿ ಪ್ರಾಯ ವ್ಯಕ್ತಪಡಿಸುವ ಹಕ್ಕು ಪ್ರತಿ ಯೊಬ್ಬರಿಗೂ ಇದೆ. ಇದಕ್ಕೆ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು. ಆದರೆ ಇಂದು ವಾಕ್ ಸ್ವಾತಂತ್ರವನ್ನು ತಡೆಯುವಂತಹ ಕಾರ್ಯ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News