ವಿಧಾನಪರಿಷತ್ ಸಭಾಪತಿ ಪ್ರವಾಸ

Update: 2016-01-01 18:50 GMT

ಮಂಗಳೂರು, ಜ.1: ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಜ.3ರಂದು ಅಪರಾಹ್ನ 3:45ಕ್ಕೆ ಮಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಸಂಜೆ 4:30ಕ್ಕೆ ಐಕಳ ಗ್ರಾಮದಲ್ಲಿ ಆಯೋಜಿಸಿರುವ ಕಂಬಳ ಕ್ರೀಡಾ ಸಮಾರೋಪ ಸಮಾ ರಂಭದಲ್ಲಿ ಭಾಗವಹಿಸಿ, ಸಂಜೆ 7:45ಕ್ಕೆ ಮಂಜೇಶ್ವರ ಸುಬ್ಬಯ್ಯನಕಟ್ಟೆ ಯಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಭಾಗವಹಿಸುವರು. ಜ.4ರಂದು ಪುತ್ತೂರಿಗೆ ಹೊರಟು ಕಬಕ ಪೋಳ್ಯದ ಶ್ರೀನಿವಾಸ ಸಭಾಭವನದಲ್ಲಿ ಸ್ಥಳೀಯ ಕಾರ್ಯ ಕ್ರಮದಲ್ಲಿ ಭಾಗವಹಿಸುವರು ಎಂದು ಪ್ರಕಟನೆೆ ತಿಳಿಸಿದೆ. ಇಂದು ಬ್ಲಾಕ್ ಸಮಿತಿ ಸಭೆ
    ಉಡುಪಿ, ಜ.1: ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆ ಬಗ್ಗೆ ಚರ್ಚಿಸಲು ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ, ವೀಕ್ಷಕರ ಮತ್ತು ಪಕ್ಷದ ಪದಾಧಿಕಾರಿಗಳ ಸಭೆಯನ್ನು ಬ್ರಹ್ಮಗಿರಿ ಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜ.2ರಂದು ಪೂರ್ವಾಹ್ನ 11:30ಕ್ಕೆ ಕರೆಯಲಾ ಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News