ಯು.ವಾಸುದೇವ ಭಟ್‌ಗೆ ಸ್ವರ ಸುರಭಿ ಪ್ರಶಸ್ತಿ ಪ್ರದಾನ

Update: 2016-01-02 17:38 GMT

ಉಡುಪಿ, ಜ.2: ಸಂಗೀತ ವಿದ್ವಾಂಸರು ಹಾಗೂ ಸಂಗೀತಾಭಿಮಾನಿಗಳ ಸಮಕ್ಷಮದಲ್ಲಿ ಬೆಂಗಳೂರಿನ ಶ್ರೀ ಪುತ್ತಿಗೆ ಮಠದ ಗೋವರ್ಧನಾ ಕ್ಷೇತ್ರದಲ್ಲಿ ಸಂಗೀತ ವಿದ್ವಾಂಸ ನಾದವೈಭವಂ ಉಡುಪಿ ವಾಸುದೇವ ಭಟ್‌ರಿಗೆ 2015ನೆ ಸಾಲಿನ ಪ್ರತಿಷ್ಠಿತ ‘ಸ್ವರಸುರಭಿ’ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಾಹಿತಿಗಳಾದ ಪ್ರೇಮಾ ಭಟ್ ಮತ್ತು ಜಿ. ಆರ್. ಸುಬ್ರಮಣ್ಯ, ಹಿಂದೂಸ್ಥಾನಿ ಕಲಾವಿದ ಪಂಡಿತ್ ಬಿ.ವಿ ರಾಧಾಕೃಷ್ಣ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ, ಪತ್ರಕರ್ತ ಶೇಖರ ಅಜೆಕಾರು, ಸುನಂದಾ ವಾಸುದೇವ ಭಟ್ ಅತಿಥಿಗಳಾಗಿದ್ದರು. ಸಂಸ್ಥೆಯ ಅಧ್ಯಕ್ಷ ಶ್ರೀಧರ್ ಅಯ್ಯರ್ ಸ್ವಾಗತಿಸಿದರು. ಎಸ್.ಗಿರಿಧರ್, ವಸುಧಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News