ಶಾಸಕ ಮೊಯ್ದಿನ್ ಬಾವಾರಿಂದ ಹೊಸ ವರ್ಷಾಚರಣೆ

Update: 2016-01-02 18:26 GMT


ಸುರತ್ಕಲ್, ಜ.2: ಇಲ್ಲಿನ ಮಧ್ಯ ದಲಿತ ಕಾಲನಿಯಲ್ಲಿ ಶಾಸಕ ಮೊಯ್ದಿನ್ ಬಾವ ಸಿಹಿ ಹಂಚಿ, ಕಾಲನಿಯ ಪ್ರತೀ ಮನೆಗೆ ಸೀರೆ ವಿತರಿಸುವ ಮೂಲಕ ವಿಶೇಷವಾಗಿ ಹೊಸವರ್ಷ ಆಚರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ರಾಜ್ಯ ಸರಕಾರ ಅಲ್ಪ ಸಂಖ್ಯಾತರು, ದಲಿತರು ಹಿಂದಿಳಿದ ವರ್ಗಗಳ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಎಲ್ಲರೂ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಬಶೀರ್ ಅಹ್ಮದ್, ಸದಾನಂದ ಶೆಟ್ಟಿ, ರಮಾನಂದ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News