ಜ.4: ಕಾಸರಗೋಡಿನಲ್ಲಿ ಜನಪಕ್ಷ ಯಾತ್ರೆ
ಕಾಸರಗೋಡು: ಕೋಮುವಾದ , ಅಸಹಿಷ್ಣುತೆ ಹಾಗೂ ಕೇಂದ್ರ ಸರಕಾರದ ಕೃಷಿ , ಜನ ವಿರೋಧಿ ನೀತಿಯ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ
ಪ್ರತಿಭಟಿಸಿ ಕೆ .ಪಿ . ಸಿ .ಸಿ ಅಧ್ಯಕ್ಷ ವಿ . ಎಂ ಸುಧೀರನ್ ನೇತ್ರತ್ವದಲ್ಲಿ ಜನಪಕ್ಷ ಯಾತ್ರೆ ನಾಳೆ ( ೪) ಕಾಸರಗೋಡಿನಿಂದ ಪ್ರಯಾಣ ಬೆಳಸಲಿದ್ದು , ಫೆಬ್ರವರಿ ಒಂಭತ್ತರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ. ಯಾತ್ರೆಯ ಉದ್ಘಾಟನೆಗೆ ಕುಂಬಳೆ ಸಜ್ಜಾಗಿದೆ .
ಸಂಜೆ ನಾಲ್ಕು ಗಂಟೆಗೆ ಕುಂಬಳೆ ಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಯಾತ್ರೆಗೆ ಚಾಲನೆ ನೀಡುವರು .
ಗ್ರಹ ಸಚಿವ ರಮೇಶ್ ಚೆನ್ನಿತ್ತಲ ಅಧ್ಯಕ್ಷತೆ ವಹಿಸುವರು . ಎ ಐ ಸಿ ಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಮಾತನಾಡಲಿರುವರು .
ಸಮಾರಂಭದಲ್ಲಿ ಕೇರಳ ಮತ್ತು ಕರ್ನಾಟಕದ ಹಲವು ಸಚಿವರು , ಸಂಸದರು , ಶಾಸಕರು , ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿರುವರು .
ಯಾತ್ರೆಗೆ ಸಂಜೆ ಆರು ಗಂಟೆಗೆ ಚೆರ್ಕಳ ದಲ್ಲಿ ಸ್ವಾಗತ ನೀಡಲಾಗುವುದು . ಐದರಂದು ಚಟ್ಟ೦ಚಾಲ್, ಕಾನ್ಚಾ೦ಗಾಡ್, ತ್ರಿಕ್ಕರಿಪುರ ದಲ್ಲಿ ಸ್ವಾಗತ ನೀಡಲಾಗುವುದು.