×
Ad

ಜಾಹೀರಾತು ಫಲಕ ಬಿದ್ದು ಕಾರ್ಮಿಕ ಮೃತ್ಯು

Update: 2016-01-04 00:23 IST

ಕೋಟ, ಜ.3: ಕಬ್ಬಿಣದ ಜಾಹೀರಾತು ಫಲಕವೊಂದು ಮೈಮೇಲೆ ಬಿದ್ದ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಬನ್ನಾಡಿ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.

ಮೃತರನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸಿಂಗಪ್ಪ ಜಲ್ಲೇರ ಎಂಬವರ ಪುತ್ರ ಸಿದ್ದೇಶ(36) ಎಂದು ಗುರುತಿಸಲಾಗಿದೆ. ಇವರು ಗುತ್ತಿಗೆದಾರ ಉದಯ ಶೆಟ್ಟಿ ಎಂಬವರೊಂದಿಗೆ ಜಾಹೀರಾತು ಫಲಕವನ್ನು ಅಳವಡಿಸುವ ಕೆಲಸ ಮಾಡಿಕೊಂಡಿದ್ದರು. ಜಾಹೀರಾತು ಫಲಕ ಅಳವಡಿಸುವಾಗ ಅದು ಆಕಸ್ಮಿಕವಾಗಿ ಸಿದ್ದೇಶರ ಮೈಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಅವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News