ಗೇರು ನೆಡುತೋಪಿಗೆ ಬೆಂಕಿ: 6 ಲಕ್ಷ ರೂ. ನಷ್ಟ

Update: 2016-01-05 18:43 GMT

ಕೋಟ, ಜ.5: ಮೊಳಹಳ್ಳಿ ಗ್ರಾಮದಲ್ಲಿರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಕುಂದಾಪುರ ಘಟಕಕ್ಕೆ ಸೇರಿದ ಗೇರು ನೆಡುತೋಪಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಲಕ್ಷಾಂತರ ರೂ. ನಷ್ಟ ಉಂಟು ಮಾಡಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಿಯಾರದ ರಾಮ ಪೂಜಾರಿ ಎಂಬವರು ಈ ನೆಡುತೋಪನ್ನು ಬಾಲಕೃಷ್ಣ ಶೆಟ್ಟಿ ಎಂಬವರಿಂದ ಸಬ್ ಕಂಟ್ರಾಕ್ಟ್ ವಹಿಸಿಕೊಂಡಿದ್ದು, ಈ ಗೇರು ಮರದ ಹಾಡಿಗೆ ಜ.1ರಂದು ಕೋಡಿಯ ಗಣೇಶ ಮೊಗವೀರ ಹಾಗೂ ಇತರ 2-3 ಮಂದಿ ಸೇರಿಕೊಂಡು ಬೆಂಕಿ ಹಚ್ಚಿದ್ದರು. ಇದರ ಪರಿಣಾಮ ಸುಮಾರು 20-25 ಹೆಕ್ಟೇರ್ ಗೇರು ನೆಡುತೋಪು ಸುಟ್ಟು ಹೋಗಿ ಸುಮಾರು 4 ರಿಂದ 5 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಲಾಗಿದೆ.

 ಕಳೆದ ವರ್ಷ ತಾನು ವಹಿಸಿಕೊಂಡಿದ್ದ ಗೇರು ನೆಡುತೋಪನ್ನು ಈ ಬಾರಿ ಬಾಲಕೃಷ್ಣ ಶೆಟ್ಟಿ ವಹಿಸಿಕೊಂಡಿರುವ ದ್ವೇಷದಿಂದ ಗಣೇಶ್ ಮೊಗವೀರ ಈ ಕೃತ್ಯವನ್ನು ಎಸಗಿರುವುದಾಗಿ ರಾಮ ಪೂಜಾರಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News