×
Ad

ಚಿನ್ನಾಭರಣ ಕಳವು: ದೂರು

Update: 2016-01-07 00:01 IST

ಮಂಗಳೂರು, ಜ. 6: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ 1.5 ಲಕ್ಷ ರೂ. ವೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಮರೋಳಿಯ ನಿವಾಸಿ ಕೀರ್ತನ್ ಸುವರ್ಣರ ಪತ್ನಿ ಬಬಿತಾ ಎಂಬವರು ಒತ್ತೆ ಇಡಲೆಂದು ಚಿನ್ನಾಭರಣವನ್ನು ಮನೆಯಿಂದ ತಂದಿದ್ದರೆನ್ನಲಾಗಿದೆ. ಬೆಳಗ್ಗೆ ಸುಮಾರು 9:15ಕ್ಕೆ ಚಿನ್ನಾಭರಣ ಹೊಂದಿದ್ದ ಪರ್ಸ್‌ನ್ನು ಬ್ಯಾಗಿನಲ್ಲಿಟ್ಟು ನಾಗುರಿಯಿಂದ ಮಂಗಳೂರಿನ ಕಡೆಗೆ ಪ್ರಯಾಣಿಸಿದ್ದರು. ಮಲ್ಲಿಕಟ್ಟೆಯಲ್ಲಿ ಬಸ್ಸಿನಿಂದಿಳಿದು ಪರ್ಸ್‌ನ್ನು ತೆಗೆಯಲು ಬ್ಯಾಗನ್ನು ನೋಡಿದಾಗ ಪರ್ಸ್ ಕಾಣೆಯಾಗಿತ್ತು. ಪರ್ಸ್‌ನಲ್ಲಿ ಸುಮಾರು 30 ಗ್ರಾಂ ತೂಕದ ಹವಳದ ಸರ-1, 16 ಗ್ರಾಂ ತೂಕದ ಚಿನ್ನದ ಬಳೆ-2, 10 ಗ್ರಾಂ ತೂಕದ ಕಿವಿಯ ಬೆಂಡೋಲೆ ಜುಮುಕಿ ಸಹಿತ-1 ಜೊತೆ, 8 ಗ್ರಾಂ ತೂಕದ ಚಿನ್ನದ ಉಂಗುರ-2, ಹೀಗೆ ಒಟ್ಟು 64 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದ್ದು, ಸುಮಾರು 1.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಬಬಿತಾ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News