×
Ad

ಸ್ವಾರ್ಥಪರ ಚಿಂತನೆಯಿಂದ ಸಮಾಜದಲ್ಲಿ ಕ್ಷೋಭೆ: ಟಿ.ಎಸ್. ನಾಗಾಭರಣ

Update: 2016-01-07 00:08 IST

ಮಂಗಳೂರು, ಜ.6: ಇನ್ನೊಬ್ಬರನ್ನು ಗೌರವಿಸದ ಸ್ವಾರ್ಥಪರ ಚಿಂತನೆಗ ಳಿಂದಾಗಿ ಸಮಾಜದಲ್ಲಿ ಕ್ಷೋಭೆ, ಅಸಹಿಷ್ಣು ಮನೋಸ್ಥಿತಿಗಳು ಹೆಚ್ಚಿವೆ. ಇಂತಹ ಮನಸ್ಥಿತಿಯ ಸಮಾಜವನ್ನು ಸ್ನೇಹವಾದದಿಂದ ಮುನ್ನಡೆಸುವ ಗುರಿ ಯನ್ನು ಹೊಂದಿರಬೇಕು ಎಂದು ಚಲನ ಚಿತ್ರ ನಿರ್ದೇಶಕ ಟಿ. ಎಸ್.ನಾಗಾಭರಣ ನುಡಿದರು.

ಅವರು ಇಂದು ಸಮರ್ಥ ಭಾರತದ ವತಿಯಿಂದ ನಗರದ ಎಸ್‌ಡಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವಿವೇಕ್ ಬ್ಯಾಂಡ್’ ಲೋಕಾ ರ್ಪಣೆ ಮಾಡಿ ಮಾತನಾಡುತ್ತಿದ್ದರು.

ಮಂಗಳೂರು ವಿವಿ ಕುಲಸಚಿವ ಟಿ.ಡಿ. ಕೆಂಪರಾಜು ಮಾತನಾಡಿ, ಪ್ರಜಾ ಪ್ರಭುತ್ವ ಹೊಂದಿರುವ ಭಾರತ ದೇಶದಲ್ಲಿ ಮಾನವ ಸಂಪನ್ಮೂಲ ಹಾಗೂ ಯುವ ಶಕ್ತಿ ಅಧಿಕವಾಗಿದೆ. ದೇಶ ಸಾಕಷ್ಟು ಅಭಿವೃದ್ಧಿಯಾಗಿದ್ದರೂ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಶೈಕ್ಷಣಿಕ ಮೌಲ್ಯಗಳು ಕುಸಿಯುತ್ತಿವೆ. ರೈತರು, ಅಶಿಕ್ಷಿತರು, ನಿರುದ್ಯೋಗಿಗಳಿಂದ ದೇಶಕ್ಕೆ ಅಪಾಯವಾಗುತ್ತಿಲ್ಲ.

ಆದರೆ ವಿದ್ಯಾವಂತರಿಂದಲೇ ಸಮಸ್ಯೆಯಾಗಿರುವುದು ವಿಪರ್ಯಾಸ ಎಂದರು. ವೇದಿಕೆಯಲ್ಲಿ ನಿಟ್ಟೆ ವಿಶ್ವವಿದ್ಯಾನಿಲ ಯದ ಸಹ ಕುಲಾಧಿ ಪತಿ ವಿವೇಕ್ ಹೆಗ್ಡೆ, ಎಸ್‌ಡಿಎಂ ಕಾಲೇಜು ನಿರ್ದೇಶಕ ಡಾ.ದೇವರಾಜ್ ಉಪಸ್ಥಿತರಿದ್ದರು. ವಿದುಷಿ ಲತಾ ನಾಗರಾಜ್ ಪ್ರಾಸ್ತಾವಿ ಕವಾಗಿ ಮಾತನಾಡಿದರು. ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರ ಶೇಖರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿ ಮುರಳೀಧರ ಶೆಣೈ ಪ್ರಾರ್ಥಿಸಿದರು.


ಇಂದು ಸಂಸ್ಕಾರದಿಂದಲೇ ಭಾರತ ಗಟ್ಟಿಯಾಗಿ ನಿಂತಿದೆ. ಇಲ್ಲದಿದ್ದರೆ ವಿಚ್ಛೇದನಗಳಿಂದಲೇ ಭಾರತ ಛಿದ್ರವಾಗುತ್ತಿತ್ತು. ಭಾರತದಲ್ಲಿ ದ್ವೇಷ ಇಲ್ಲ. ಸಹಿಷ್ಣುತೆ ಇದೆ. ಸರಳವಾದ, ಸ್ನೇಹವಾದವನ್ನೇ ಹಿಂದಿನಿಂದಲು ಅನುಸರಿಸಿಕೊಂಡು ಬಂದಿದ್ದೆವು. ಸ್ನೇಹದ ಹಸ್ತ ಸಮಾಜದಲ್ಲಿ ಹಾಗೂ ಇತರ ರಾಷ್ಟ್ರಗಳೊಂದಿಗೆ ಇಂದಿಗೂ ಮುಂದುವರಿದಿದೆ. ಬಸವಣ್ಣನವರ ‘ದಾಸೋಹ’ ಇದಕ್ಕೊಂದು ಉದಾಹರಣೆ.
                   -ಟಿ.ಎಸ್.ನಾಗಾಭರಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News