×
Ad

ಹೊಯ್ಗೆ ಬಝಾರ್: ಶೆಡ್‌ಗಳಿಗೆ ಬೆಂಕಿ

Update: 2016-01-08 23:56 IST

ಮಂಗಳೂರು, ಜ.8: ತಮಿಳುನಾಡಿನ ಕುಟುಂಬವೊಂದು ವಾಸಿಸುತ್ತಿದ್ದ ಹೊಯ್ಗೆಬಝಾರ್‌ನಲ್ಲಿರುವ ಶೆಡ್‌ವೊಂದಕ್ಕೆ ಬೆಂಕಿ ತಗಲಿ ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.

ಬೆಂಕಿ ಅವಘಡದ ಸಂದರ್ಭದಲ್ಲಿ ಶೆಡ್‌ನಲ್ಲಿ ನಾಲ್ಕು ಮಂದಿ ಇದ್ದರೆಂದು ಹೇಳಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶೆಡ್‌ನಲ್ಲಿದ್ದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ಮೀನುಗಾರಿಕೆ ವೃತ್ತಿಯ ಈ ಕುಟುಂಬವು ಕೆಲವು ತಿಂಗಳುಗಳಿಂದ ಹೊಯ್ಗೆ ಬಝಾರ್‌ನ ಶೆಡ್‌ವೊಂದರಲ್ಲಿ ವಾಸಿಸುತ್ತಿದೆ. ಶೆಡ್‌ನಲ್ಲಿದ್ದ 1 ಲಕ್ಷ ರೂ. ನಗದು ಮತ್ತು ಮೀನುಗಳ ಸಹಿತ ಮನೆಯ ಉಪಕರಣಗಳು ಬೆಂಕಿಗಾಹುತಿಯಾಗಿವೆ. ಪಕ್ಕದ ಎರಡು ಶೆಡ್‌ಗೂ ಬೆಂಕಿ ತಗಲಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News