×
Ad

ವಿದ್ಯುತ್ ಆಘಾತ: ಯುವಕ

Update: 2016-01-10 00:17 IST

ಮಲ್ಪೆ, ಜ.9: ವಿದ್ಯುತ್ ಕಂಬಕ್ಕೆ ಹತ್ತಿ ಬ್ಯಾನರ್ ಕಟ್ಟುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗಲಿ ಯುವಕನೋರ್ವ ಮೃತಪಟ್ಟ ಘಟನೆ ಕಡೆಕಾರು ಎಂಬಲ್ಲಿ ಶುಕ್ರವಾರ ರಾತ್ರಿ 8:30ಕ್ಕೆ ನಡೆದಿದೆ.

ಮೃತರನ್ನು ಬ್ರಹ್ಮಾವರ ಹಂದಾಡಿಯ ಶ್ರೀನಿವಾಸ ನಾಯಕ್‌ರ ಮಗ ನಿತ್ಯಾನಂದ (24) ಎಂದು ಗುರುತಿಸಲಾಗಿದೆ. ಇವರು ಜಿಮ್ ಸಂಸ್ಥೆಗೆ ಸಂಬಂಧಿಸಿದ ಬ್ಯಾನರನ್ನು ಕಟ್ಟುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಬ್ಯಾನರಿನ ಪೈಪ್‌ಗೆ ತಗಲಿತು. ಇದರಿಂದ ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟರು. ಇವರೊಂದಿಗಿದ್ದ ಇನ್ನೊಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News