ದೇರಳಕಟ್ಟೆ: ಇಂದು ‘ದಿ ಚಿಕನ್ ಬೇ’ ರೆಸ್ಟೋರೆಂಟ್ ಶುಭಾರಂಭ
ಮಂಗಳೂರು, ಜ.9: ಕೆೆ ಮಂಡೊಲಿಸ್ರವರು ದೇರಳಕಟ್ಟೆಯ ನೀಲಗಿರಿಸ್ ಸಮೀಪದ ಹಜ್ಜಾಜ್ ಕಾಂಪ್ಲೆಕ್ಸ್ನಲ್ಲಿ ಆರಂಭಿಸಲಿರುವ ‘ದಿ ಚಿಕನ್ ಬೇ’ ರೆಸ್ಟೋರೆಂಟ್ ಜ.10ರಂದು ಸಂಜೆ 6:30ಕ್ಕೆ ಶುಭಾರಂಭಗೊಳ್ಳಲಿದೆ.
ರೆಸ್ಟೋರೆಂಟನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. ಕೆೆ ಮಂಡೋಲಿಸ್ನ ಚೇರ್ಮೆನ್ ಶಬೀರ್ ಮಂಡೋಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಯು.ಟಿ. ಖಾದರ್, ಶಾಸಕರಾದ ಮೊಯ್ದಿನ್ ಬಾವ, ಐವನ್ ಡಿಸೋಜ, ಕಣಚೂರು ಗ್ರೂಪ್ ಆ್ ಕಂಪೆನೀಸ್ ಅಧ್ಯಕ್ಷ ಯು.ಕೆ.ಮೋನು ಕಣಚೂರು, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬೆಳ್ಮ ಗ್ರಾಪಂ ಅಧ್ಯಕ್ಷ ವಿಜಯ್ ಕೆ., ‘ದಿ ಚಿಕನ್ ಬೇ’ ಪಾಲುದಾರರಾದ ಅಬ್ದುಲ್ ನಾಸಿರ್, ಅಬ್ದುಲ್ ಜಲೀಲ್, ಮುಹಮ್ಮದ್ ಇಮ್ರಾನ್ ಉಪಸ್ಥಿತರಿರುವರು.
‘ದಿ ಚಿಕನ್ ಬೇ’ ರೆಸ್ಟೋರೆಂಟ್ನಲ್ಲಿ ಟಿಸಿಬಿ ಗ್ರಿಲ್ ಬರ್ಗರ್, ಕ್ರಂಚಿ ಚಿಕನ್ ಬರ್ಗರ್, ಜ್ಯೂಸಿ ಗ್ರಿಲ್ ಬರ್ಗರ್, ವೆಜ್ ಆ್ಯಂಡ್ ಚೀಸಿ ಬರ್ಗರ್, ಗೊ-ಗ್ರೀನ್ ಬರ್ಗರ್, ಚಿಕ್ - ಒ -ವ್ಯ್ರಾಪ್, ಸಾ್ಯೆ್ರೆೆನ್ ರೈಸ್ ವಿದ್ ಪಾಪ್ ಚಿಕ್, ಗ್ರಿಲ್ಡ್ ಚಿಕನ್ ಬೋನ್ಲೆಸ್, ವೆಜ್ಜಿ ಪಾಸ್ತಾ (ರೆಡ್ ಆ್ಯಂಡ್ ವೈಟ್) ಮುಂತಾದ ತಿನಿಸುಗಳು ಗ್ರಾಹಕರಿಗೆ ಲಭ್ಯ. ಯಾವುದೇ ಬಣ್ಣಗಳನ್ನು ಬಳಸದೆ ಇಲ್ಲಿ ಸ್ವಾದಿಷ್ಟಕರ ಆಹಾರ ಪದಾರ್ಥಗಳಲ್ಲಿ ತಯಾರಿಸಲಾಗುತ್ತದೆ. ಅಲ್ಲದೆ ಆಹಾರ ಪದಾರ್ಥಗಳ ಹೋಂ ಡೆಲಿವರಿ ಸೌಲಭ್ಯವೂ ಇರಲಿದೆ. ಕೆೆ ಮಂಡೊಲಿಸ್ ಕಂಕನಾಡಿ, ಅತ್ತಾವರ, ಮಣಿಪಾಲಗಳಲ್ಲಿ ಶೀಘ್ರದಲ್ಲಿ ‘ದಿ ಚಿಕನ್ ಬೇ’ ಶಾಖೆಗಳನ್ನು ಆರಂಭಿಸಲಿದೆ ಎಂದು ಪ್ರಕಟನೆ ತಿಳಿಸಿದೆ.