ಇಂದು ಸಾಮೂಹಿಕ ವಿವಾಹ
Update: 2016-01-10 00:31 IST
ಮಂಗಳೂರು, ಜ.9: ಉರುಮಾಲ್ ಮಾಸ ಪತ್ರಿಕೆಯ ದಶಮಾನೋತ್ಸವದ ಅಂಗವಾಗಿ ಜ.10ರಂದು ಮಂಗಳಪೇಟೆಯಲ್ಲಿ ಆದರ್ಶ ಸಾಮೂಹಿಕ ವಿವಾಹ ನಡೆಯಲಿದೆ.
ನಿಖಾಹ್ ನೇತೃತ್ವವನ್ನು ಅಸ್ಸೈಯದ್ ಅಬ್ದುರ್ರಹ್ಮಾನ್ ಸಾದತ್ ತಂಙಳ್ ಗುರುವಾಯನಕೆರೆ ವಹಿಸಲಿದ್ದಾರೆ. ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಕೆ. ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆತಿಳಿಸಿದೆ.