ಕಾಸರಗೋಡು: ಜ.12ರಂದು ವಿವೇಕಾನಂದ ಜಯಂತಿ
Update: 2016-01-10 14:29 IST
ಕಾಸರಗೋಡು : ವಿವೇಕಾನಂದ ಎಜುಕೇಶನಲ್ ಟ್ರಸ್ಟ್ ಮತ್ತು ವಿವೇಕಾನಂದ ಜಯಂತಿ ದಿನಾಚರಣೆಯನ್ನು
ಜನವರಿ 12 ರಂದು ಬೆಳಿಗ್ಗೆ 10.30 ಕ್ಕೆ ಕಾಸರಗೋಡು ನಗರಸಭಾಂಗಣದಲ್ಲಿ ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ . ಎಸ್ ಯಡಿಯೂರಪ್ಪ ಉದ್ಘಾಟಿಸುವರು .
ಟ್ರಸ್ಟ್ ಅಧ್ಯಕ್ಷ ಎನ್ . ಸತೀಶ್ ಅಧ್ಯಕ್ಷತೆ ವಹಿಸುವರು . ವೆಬ್ ಸೈಟ್ ನ್ನು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ , ಧನಸಹಾಯ ವಿತರಣೆಯನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸುವರು ಎಂದು ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು .
ಎನ್. ಸತೀಶ್ , ವೇಣುಗೋಪಾಲ್ , ಸಿ. ವಿ ಪೊದುವಾಲ್, ಕೆ . ಕರುಣಾಕರನ್ ನಂಬ್ಯಾರ್ ಮೊದಲಾದವರು ಉಪಸ್ಥಿತರಿದ್ದರು.