×
Ad

ಕಾಸರಗೋಡು: ಜ.15ರಿಂದ ನವಕೇರಳ ಜಾಥಾ

Update: 2016-01-11 10:55 IST

ಕಾಸರಗೋಡು : ಸಿಪಿಐ ಎಂ    ರಾಜ್ಯ ಸಮಿತಿ ನೇತ್ರತ್ವದಲ್ಲಿ  ಪಾಲಿಟ್ ಬ್ಯುರೋ  ಸದಸ್ಯ ಪಿಣರಾಯಿ ವಿಜಯನ್  ನೇತ್ರತ್ವದ  ನವಕೇರಳ ಜಾಥಾ ಜನವರಿ15 ರಂದು ಉಪ್ಪಳದಿಂದ ಪ್ರಯಾಣ ಬೆಳೆಸಲಿದೆ .

ಸಂಜೆ ನಾಲ್ಕು ಗಂಟೆಗೆ  ಉಪ್ಪಳ ಪೇಟೆಯಲ್ಲಿ ನಡೆಯುವ  ಸಮಾರಂಭದಲ್ಲಿ  ಸಿಪಿಎಂ ಹಿರಿಯ ಮುಖಂಡ ಪ್ರಕಾಶ್ ಕಾರಟ್  ಜಾಥಾ ಕ್ಕೆ  ಚಾಲನೆ ನೀಡುವರು .  ಪ್ರತಿಪಕ್ಷ ನಾಯಕ ವಿ .ಎಸ್ ಅಚ್ಯುತಾನಂದನ್, ಪಕ್ಷದ ರಾಜ್ಯ ಕಾರ್ಯದರ್ಶಿ  ಕೊಡಿಯೇರಿ ಬಾಲಕೃಷ್ಣನ್  ಉಪಸ್ಥಿತರಿರುವರು.

ಜಾತ್ಯಾತೀತ, ಭ್ರಷ್ಟಾಚಾರ ಮುಕ್ತ ,ಅಭಿವ್ರದ್ದಿ ಕೇರಳ ಎಂಬ  ಘೋಷಣೆಯೊಂದಿಗೆ ಈ ಜಾಥಾ ನಡೆಯಲಿದ್ದು, ಫೆಬ್ರವರಿ 24  ರಂದು ತಿರುವನಂತಪುರ ದಲ್ಲಿ ಜಾಥಾ ಕೊನೆಗೊಳ್ಳಲಿದೆ  ಎಂದು  ಪಕ್ಷದ ಮುಖಂಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ. ಪಿ ಸತೀಶ್ಚಂದ್ರನ್ , ಮಾಜಿ ಶಾಸಕ ಸಿ . ಎಚ್  ಕುನ್ಚಂಬು ಮೊದಲಾದವರು ಉಪಸ್ಥಿತರಿದ್ದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News