ಕಾಸರಗೋಡು: ಜ.15ರಿಂದ ನವಕೇರಳ ಜಾಥಾ
Update: 2016-01-11 10:55 IST
ಕಾಸರಗೋಡು : ಸಿಪಿಐ ಎಂ ರಾಜ್ಯ ಸಮಿತಿ ನೇತ್ರತ್ವದಲ್ಲಿ ಪಾಲಿಟ್ ಬ್ಯುರೋ ಸದಸ್ಯ ಪಿಣರಾಯಿ ವಿಜಯನ್ ನೇತ್ರತ್ವದ ನವಕೇರಳ ಜಾಥಾ ಜನವರಿ15 ರಂದು ಉಪ್ಪಳದಿಂದ ಪ್ರಯಾಣ ಬೆಳೆಸಲಿದೆ .
ಸಂಜೆ ನಾಲ್ಕು ಗಂಟೆಗೆ ಉಪ್ಪಳ ಪೇಟೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಿಪಿಎಂ ಹಿರಿಯ ಮುಖಂಡ ಪ್ರಕಾಶ್ ಕಾರಟ್ ಜಾಥಾ ಕ್ಕೆ ಚಾಲನೆ ನೀಡುವರು . ಪ್ರತಿಪಕ್ಷ ನಾಯಕ ವಿ .ಎಸ್ ಅಚ್ಯುತಾನಂದನ್, ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಉಪಸ್ಥಿತರಿರುವರು.
ಜಾತ್ಯಾತೀತ, ಭ್ರಷ್ಟಾಚಾರ ಮುಕ್ತ ,ಅಭಿವ್ರದ್ದಿ ಕೇರಳ ಎಂಬ ಘೋಷಣೆಯೊಂದಿಗೆ ಈ ಜಾಥಾ ನಡೆಯಲಿದ್ದು, ಫೆಬ್ರವರಿ 24 ರಂದು ತಿರುವನಂತಪುರ ದಲ್ಲಿ ಜಾಥಾ ಕೊನೆಗೊಳ್ಳಲಿದೆ ಎಂದು ಪಕ್ಷದ ಮುಖಂಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ. ಪಿ ಸತೀಶ್ಚಂದ್ರನ್ , ಮಾಜಿ ಶಾಸಕ ಸಿ . ಎಚ್ ಕುನ್ಚಂಬು ಮೊದಲಾದವರು ಉಪಸ್ಥಿತರಿದ್ದರು .