‘ಅಂಬಲಪಾಡಿ ನಾಟಕೋತ್ಸವ’ಕ್ಕೆ ಚಾಲನೆ
ಉಡುಪಿ, ಜ.12: ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಉಡುಪಿ ರಂಗಭೂಮಿಯು ದಿ.ನಿ.ಬಿ.ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ಹಮ್ಮಿ ಕೊಳ್ಳಲಾದ ಎರಡು ದಿನಗಳ ‘ಅಂಬಲಪಾಡಿ ನಾಟಕೋತ್ಸವ’ಕ್ಕೆ ಚಾಲನೆ ನೀಡಲಾಯಿತು.
ಅಂಬಲಪಾಡಿ ದೇವಳದ ತೆರೆದ ರಂಗಮಂಟಪದಲ್ಲಿ ನಾಟಕೋತ್ಸವವನ್ನು ಉಡುಪಿ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗಣ ರಾಜ್ ಭಟ್ ಉದ್ಘಾಟಿಸಿದರು. ದೇವಳದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.
ಅಂಬಲಪಾಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ, ಉದ್ಯಮಿ ಉದಯ ಕುಮಾರ್ ಅತಿಥಿಗಳಾಗಿದ್ದರು. ಸುವರ್ಣ ರಂಗಭೂಮಿ ಸಮಿತಿಯ ಕಾರ್ಯಾಧ್ಯಕ್ಷ ಯು.ಉಪೇಂದ್ರ, ಡಾ. ಅರವಿಂದ ನಾಯಕ್ ಉಪಸ್ಥಿತರಿದ್ದರು.
ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ವಾಸುದೇವ ರಾವ್ ಕಾರ್ಯಕ್ರಮ ನಿರೂಪಿಸಿದರು. ಮಂಜು ಕೊಡಗು ನಿರ್ದೇಶನದ ನೀನಾಸಂ ತಿರುಗಾಟದ ‘ಗುಣಮುಖ’ ನಾಟಕ ಪ್ರದರ್ಶನಗೊಂಡಿತು.