2014-15ರ ಸಾಲಿನ ಅಂತಿಮ ಬಿ.ಕಾಂ. ಪರೀಕ್ಷೆ : ಚಿನ್ನದ ಪದಕ
Update: 2016-01-13 18:52 IST
ಕಟೀಲು: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2014-15ರ ಸಾಲಿನ ಅಂತಿಮ ಬಿ.ಕಾಂ. ಪರೀಕ್ಷೆಯಲ್ಲಿ 5ಮತ್ತು 6ನೇ ಸೆಮಿಸ್ಟರ್ನ ಅಕೌಂಟೆನ್ಸಿ ವಿಷಯದಲ್ಲಿ 300ರಲ್ಲಿ 300ಅಂಕ ಪಡೆದು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಕುಮಾರಿ ರೋಶನಿ ಅವರು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದವರು ಕೊಡಮಾಡುವ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಇವರು ಸಸಿಹಿತ್ಲುವಿನ ಶ್ರೀಮತಿ ಮೋಹಿನಿ ಶೆಟ್ಟಿಗಾರ್ ರವರ ಪುತ್ರಿ.
ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2014-15ರ ಸಾಲಿನ ಅಂತಿಮ ಬಿ.ಕಾಂ. ಪರೀಕ್ಷೆಯಲ್ಲಿ 5ಮತ್ತು 6ನೇ ಸೆಮಿಸ್ಟರ್ನ ಅಕೌಂಟೆನ್ಸಿ ವಿಷಯದಲ್ಲಿ 300ರಲ್ಲಿ 300ಅಂಕ ಪಡೆದು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಕುಮಾರಿ ಹರ್ಷಿತ ಶೆಟ್ಟಿ ಅವರು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದವರು ಕೊಡಮಾಡುವ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಇವರು ಎಕ್ಕಾರು ಆನಂದ ಶೆಟ್ಟಿಯವರ ಪುತ್ರಿ.