ಇರುವೈಲು: ಕಿಂಡಿ ಅಣೆಕಟ್ಟು ಉದ್ಘಾಟನೆ
Update: 2016-01-13 19:54 IST
ಮೂಡುಬಿದಿರೆ : ಸಣ್ಣ ನೀರಾವರಿ ಇಲಾಖಾ ಯೋಜನೆಯಡಿ ಇರುವೈಲು ಗ್ರಾಮದ ದೊಡ್ಡಗುತ್ತು ಕಾಪಿಕಂಡ ಎಂಬಲ್ಲಿ ಸುಮಾರು 40ಲಕ್ಷ ರೂವಿನಲ್ಲಿ ನಿರ್ಮಿಸಿರುವ ಕಿಂಡಿ ಅಣೆಕಟ್ಟನ್ನು ರಾಜ್ಯ ಯುವಜನ ಸೇವೆ ಮತ್ತು ಮೀನುಗಾರಿಗೆ ಸಚಿವ ಕೆ. ಅಭಯಚಂದ್ರ ಜೈನ್ ಬುಧವಾರ ಉದ್ಘಾಟಿಸಿದರು.
ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ನಾಮ ನಿರ್ದೇಶಿತ ಸದಸ್ಯ ಇಕ್ಬಾಲ್ ಕರೀಂ, ಹೊಸಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ಚಂದ್ರಹಾಸ ದೇವಾಡಿಗ, ಇರುವೈಲ್ ಗ್ರಾ,ಪಂ ಸದಸ್ಯ ಜಯರಾಮ್ ಪೂಜಾರಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.