ಹೊರರಾಜ್ಯಗಳಿಗೆ ಮರಳು ಸಾಗಾಟಕ್ಕೆ ನಿಷೇಧ

Update: 2016-01-13 18:58 GMT

ಮಂಗಳೂರು, ಜ.13: ದ.ಕ. ಜಿಲ್ಲೆಯ ಮೂಲಕ ಇತರ ರಾಜ್ಯಗಳಿಗೆ ಮರಳು ಸಾಗಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
 ದ.ಕ. ಜಿಲ್ಲೆಯಿಂದ ಸ್ಥಳೀಯ ಮತ್ತು ಹೊರಜಿಲ್ಲೆಗಳಿಗೆ ಕರಾವಳಿ ನಿಯಂತ್ರಣ ವಲಯದಿಂದ ಮರಳು ತೆಗೆದು ಸಾಗಾಟಕ್ಕೆ ಈ ಹಿಂದೆ ಅನುಮತಿ ನೀಡಲಾಗಿತ್ತು. ಅದರೆ ಕೆಲವರು ಹೊರರಾಜ್ಯಗಳಿಂದ ಪಡೆದ ಪರವಾನಿಗೆಯನ್ನು ಬಳಸಿ ಹಾಗೂ ಟ್ಯಾಕ್ಸ್ ಇನ್ ವಾಯ್ಸ್ ಬಿಲ್ಲನ್ನು ಪಡೆದು, ವಾಣಿಜ್ಯ ತೆರಿಗೆಯ ಮೊಹರನ್ನು ನಕಲು ಮಾಡಿ ದ.ಕ. ಜಿಲ್ಲೆಯಿಂದ ಕೇರಳಕ್ಕೆ ಸಾಗಾಟ ಮಾಡುತ್ತಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶದಂತೆ ದ.ಕ. ಜಿಲ್ಲೆಯ ಮೂಲಕ ಬೇರೆ ರಾಜ್ಯಗಳಿಂದ ಮರಳು ಸಾಗಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News